ಪುತ್ತೂರಲ್ಲಿ ಪಿಕೆ ಚಿತ್ರ ನೋಡುವಾಗ ನಡೆದ ಘಟನೆ!
ಮಂಗಳೂರು, ಡಿ.21: ಪ್ರತಿಭಾವಂತ ನಟ ಅಮೀರ್ ಖಾನ್ ಹಾಗೂ ಅನುಷ್ಕಾ ಶರ್ಮ ಅಭಿನಯದ ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಪಿಕೆ' ಚಿತ್ರದ ಬಿಸಿ ಕರಾವಳಿಯ ಚಿತ್ರಮಂದಿರಕ್ಕೂ ತಟ್ಟಿದೆ.
ನೆಮ್ಮದಿಯಿಂದ ಚಿತ್ರ ನೋಡುವಾಗ ವಾಟ್ಸಪ್ ಮೂಲಕ ಯಾರೋ ಕಿಡಿಗೇಡಿ ಹಬ್ಬಿಸಿದ ಗಾಳಿಸುದ್ದಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿದ ಘಟನೆ ವರದಿಯಾಗಿದೆ.
ಹಿಂದೂಧರ್ಮಕ್ಕೆ
ಸೇರಿರುವ
ಕಾಲೇಜು
ವಿದ್ಯಾರ್ಥಿನಿ(20)ಯೊಬ್ಬಳು
ಅನ್ಯಕೋಮಿನ
ಯುವಕನ
ಜೊತೆಗೂಡಿ
ಚಿತ್ರಮಂದಿರದಲ್ಲಿದ್ದಾಳೆ.
ಇಬ್ಬರು
ಪಿಕೆ
ಚಿತ್ರ
ನೋಡುತ್ತಿದ್ದಾರೆ.
ಪುತ್ತೂರಿನ
ಅರುಣ
ಥಿಯೇಟರ್
ನಲ್ಲಿ
ರೆಡ್
ಹ್ಯಾಂಡ್
ಆಗಿ
ನಿಮಗೆ
ಸಿಗುತ್ತಾರೆ
ಎಂಬ
ಸಂದೇಶ
ವಾಟ್ಸಪ್
ಮೂಲಕ
ಯಾರೋ
ಒಬ್ಬ
ಕಿಡಿಗೇಡಿ
ಕಳಿಸಿದ್ದಾನೆ.
[ವಿಮರ್ಶಕ
ಕೆಂಗಣ್ಣು
ಕೂಡಾ
ತಂಪಾಗಿಸಿದ
'ಪಿಕೆ'
ಅಮೀರ]
ಈ ಸಂದೇಶದ ಜಾಡು ಹಿಡಿದು ಹೊರಟ ಪುತ್ತೂರು ನಗರ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಚಿತ್ರಮಂದಿರದ ಬಳಿ ಬಂದ ಪೊಲೀಸರು ಆಪರೇಟರ್ ಬಳಿ ಹೋಗಿ ವಾಟ್ಸಪ್ಸಂದೇಶದಲ್ಲಿ ವಿದ್ಯಾರ್ಥಿನಿಯನ್ನು ಹೊರಕ್ಕೆ ಕರೆಸಿಕೊಂಡಿದ್ದಾರೆ.
ಚಿತ್ರ ನೋಡುತ್ತಿದ್ದ ವಿದ್ಯಾರ್ಥಿನಿ ಹೊರಕ್ಕೆ ಬಂದಿದ್ದಾಳೆ. ವಿಚಾರಣೆ ನಡೆಸಿದಾಗ ಆಕೆ ತನ್ನ ಪೋಷಕರ ಜೊತೆ ಚಿತ್ರ ನೋಡಲು ಬಂದಿರುವುದು ಸ್ಪಷ್ಟವಾಗಿದೆ. ಪಕ್ಕದಲ್ಲಿ ಕುಳಿತ ಯುವಕ ಯಾರು ಎಂಬುದು ಈಕೆಗೆ ತಿಳಿದಿಲ್ಲ ಎಂಬುದರನ್ನು ಅರಿತ ಪೊಲೀಸರು ವಿದ್ಯಾರ್ಥಿನಿ ಹಾಗೂ ಆಕೆ ಪೋಷಕರು ಚಿತ್ರ ನೋಡಲು ಒಳಗೆ ಕಳಿಸಿದ್ದಾರೆ.
ಈ ವೇಳೆಗೆ ವಾಟ್ಸಪ್ ಸಂದೇಶ ಪಡೆದುಕೊಂಡು ಉಗ್ರರಾಗಿ ಚಿತ್ರಮಂದಿರದತ್ತ ಉಭಯ ಕೋಮಿನ ಜನ ಬಂದಿದ್ದಾರೆ. ಚಿತ್ರ ಮುಗಿದ ಮೇಲೆ ವಿದ್ಯಾರ್ಥಿನಿ ಹಾಗೂ ಆಕೆ ಪೋಷಕರು ಮತ್ತೊಂದು ಬಾಗಿಲಿನಿಂದ ಮನೆ ತಲುಪುವಂತೆ ಪೊಲೀಸರು ಸುರಕ್ಷಿತ ವ್ಯವಸ್ಥೆ ಮಾಡಿದ್ದಾರೆ.
ಸಂದೇಶ ಕಳಿಸಿದ ಯುವಕನನ್ನು ಪತ್ತೆ ಹಚ್ಚಿದ ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ತಮಾಷೆಗೆ ಕಳಿಸಿದ್ದ ಸಂದೇಶದಿಂದ ಹೊರಗಡೆ ನೆರೆದಿದ್ದ ಜನ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಕಂಡು ಯುವಕ ಕೂಡಾ ಬೆಚ್ಚಿದ್ದಾನೆ. ಉಭಯ ಕೋಮಿನವರಿಗೂ ಪರಿಸ್ಥಿತಿ ಮನವರಿಕೆಯಾದ ಮೇಲೆ ಜಾಗ ಬಿಟ್ಟು ನಡೆದಿದ್ದಾರೆ. ಹೊಡಿ ಬಡಿಯಲ್ಲಿ ಅಂತ್ಯ ಕಾಣಬೇಕಿದ್ದ ವಾಟ್ಸಪ್ ಪ್ರಕರಣವನ್ನು ಪೊಲೀಸರು ಸೂಕ್ತವಾಗಿ ನಿಭಾಯಿಸಿ ಶಾಂತಿ ಕಾಯ್ದಿದ್ದಾರೆ.(ಏಜೆನ್ಸೀಸ್)