ಜನವರಿ 12ರಿಂದ ವಿವೇಕ್ ಬ್ಯಾಂಡ್ ಅಭಿಯಾನ
ಮಂಗಳೂರು, ಜನವರಿ 04 : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ 'ಉತ್ತಮನಾಗು-ಉಪಕಾರಿಯಾಗು' ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ಸಾರುವ 'ವಿವೇಕ್ ಬ್ಯಾಂಡ್-2016' ಅಭಿಯಾನ ಜನವರಿ 12ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ.
ಬೆಂಗಳೂರಿನ
ಸಾಮಾಜಿಕ
ಸಂಸ್ಥೆ
'ಸಮರ್ಥ
ಭಾರತ'
ಈ
ಯುವ
ಅಭಿಯಾನವನ್ನು
ಆಯೋಜಿಸಿದ್ದು,
ಜನವರಿ
12ರಂದು
ಸ್ವಾಮಿ
ವಿವೇಕಾನಂದರ
153ನೇ
ಜಯಂತಿ
ಮತ್ತು
ರಾಷ್ಟ್ರೀಯ
ಯುವ
ದಿನದಂದು
ರಾಜ್ಯಾದ್ಯಂತ
ನಡೆಯುವ
ಅಭಿಯಾನವನ್ನು
ಆರಂಭಿಸಲಾಗುತ್ತದೆ.
[ಸ್ವಾಮಿ
ವಿವೇಕಾನಂದ
ವ್ಯಕ್ತಿಯಲ್ಲ,
ಭಾರತದ
ಆತ್ಮ
:
ಮೋದಿ]
ಎಸ್ಡಿಎಂ ಬ್ಯುಸಿನೆಸ್ ಸೆಮಿನಾರ್ ಹಾಲ್ನಲ್ಲಿ ಜನವರಿ 6 ರಂದು ಬೆಳಗ್ಗೆ 11 ಗಂಟೆಗೆ ಅಭಿಯಾನ ಸಾಂಕೇತಿಕವಾಗಿ ಉದ್ಘಾಟನೆಗೊಳ್ಳಲಿದೆ. ನಿರ್ದೇಶಕ ಟಿ.ಎಸ್.ನಾಗಾಭರಣ, ಮಂಗಳೂರು ವಿವಿ ರಿಜಿಸ್ಟ್ರಾರ್ ವಿಶಾಲ್ ಹೆಗ್ಡೆ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. [150ರ ವಸಂತ: ಸ್ವಾಮಿ ವಿವೇಕಾನಂದರ 9 ಆಣಿಮುತ್ತು]
ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ 'ಉತ್ತಮನಾಗು-ಉಪಕಾರಿಯಾಗು' ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವುದು ಅಭಿಯಾನದ ಉದ್ದೇಶವಾಗಿದೆ. ಯುವಕ- ಯುವತಿಯರು ತಮ್ಮ ಬಲಗೈಗೆ ವಿವೇಕ್ ಬ್ಯಾಂಡ್ ಧರಿಸಲಿದ್ದು, ವಿವೇಕಾನಂದರ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ.
ವಿವೇಕ್ ಬ್ಯಾಂಡ್ ಕೈಯಲ್ಲಿ ಧರಿಸುವುದರೊಂದಿಗೆ ಆರಂಭವಾಗಲಿರುವ ಅಭಿಯಾನವು ಜನವರಿ 26ರ ತನಕ ನಡೆಯಲಿದ್ದು, ಸುಮಾರು 12 ಲಕ್ಷ ಯುವಕ-ಯುವತಿಯರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನೇಕ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು ಅಭಿಯಾನಕ್ಕೆ ಬೆಂಬಲ ನೀಡಿವೆ.
ಅಭಿಯಾನದ ರಾಯಭಾರಿಗಳು : ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ನಿರ್ಮಲನಂದನಾಥ ಸ್ವಾಮೀಜಿ, ನಾರಾಯಣ ಹೃದಯಾಲಯದ ಮುಖ್ಯಸ್ಥರಾದ ಡಾ.ದೇವಿ ಶೆಟ್ಟಿ, ನಟ ಶ್ರೀನಗರ ಕಿಟ್ಟಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮುಂತಾದವರು ವಿವೇಕ ಬ್ಯಾಂಡ್ ಅಭಿಯಾನದ ರಾಯಭಾರಿಗಳಾಗಿದ್ದಾರೆ.
ಜನವರಿ 5ರ ನಂತರ ರಾಜ್ಯದ ಅನೇಕ ಚಿಲ್ಲರೆ ಮಳಿಗೆಗಳಲ್ಲಿ ವಿವೇಕ ಬ್ಯಾಂಡ್ ಲಭ್ಯವಿರುತ್ತದೆ, ಬೆಲೆ 10 ರೂ.ಗಳು. ವಿವೇಕ್ ಬ್ಯಾಂಡ್ ದೊರೆಯುವ ಎಲ್ಲಾ ಮಾರಾಟ ಮಳಿಗೆಗಳ ಸಮಗ್ರ ವಿವರಗಳು http://www.samarthabharata.org/ ವೆಬ್ಸೈಟ್ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9880621824, 9663330692 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.