ಮೂವರಿಗೆ ಮರುಜೀವ ನೀಡಿದ ಮಂಗಳೂರಿನ ಯುವಕ
ಮಂಗಳೂರು, ಫೆಬ್ರವರಿ 25 : ಮೆದುಳು ನಿಷ್ಕ್ರಿಯಗೊಂಡಿದ್ದ ಮಂಗಳೂರಿನ ಯುವಕನೊಬ್ಬ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಮರುಜೀವ ನೀಡಿದ್ದಾನೆ. ಗುರುವಾರ ಬೆಳಗ್ಗೆ ಅಂಗಾಂಗಗಳನ್ನು ಮಂಗಳೂರಿನಿಂದ ಬೆಂಗಳೂರಿಗೆ ಸಾಗಣೆ ಮಾಡಲಾಯಿತು.
ಮಂಜೇಶ್ವರ
ನಿವಾಸಿ
ವಿನೀತ್
ರಾಜ್
(21)
ಅಂಗಾಂಗಗಳನ್ನು
ದಾನ
ಮಾಡಿದ
ಯುವಕ.
ಕಟ್ಟಡದಿಂದ
ಬಿದ್ದು
ಗಂಭೀರವಾಗಿ
ಗಾಯಗೊಂಡಿದ್ದ
ವಿನೀತ್
ಅವರನ್ನು
ನಗರದ
ಎ.ಜೆ.ಆಸ್ಪತ್ರೆಗೆ
ದಾಖಲು
ಮಾಡಲಾಗಿತ್ತು,
ಅವರ
ಮೆದುಳು
ನಿಷ್ಕ್ರಿಯಗೊಂಡಿತ್ತು.
ಆದ್ದರಿಂದ
ಪೋಷಕರು
ಅಂಗಾಂಗ
ದಾನ
ಮಾಡುವ
ನಿರ್ಧಾರವನ್ನು
ಕೈಗೊಂಡರು.
[ಮೂವರಿಗೆ
ಮರುಜೀವ
ನೀಡಿದರು]
ವಿನೀತ್ನ ಕಿಡ್ನಿ, ಯಕೃತ್ ಮುಂತಾದ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಯಕೃತ್ ಕಸಿ ಮಾಡಲಾಗುತ್ತದೆ. ಎ.ಜೆ.ಆಸ್ಪತ್ರೆಯಲ್ಲಿರುವ ವ್ಯಕ್ತಿಗೆ ಕಿಡ್ನಿ ಜೋಡಣೆ ಮಾಡಲಾಗುತ್ತದೆ. ಬೆಂಗಳೂರಿನಿಂದ ಆಗಮಿಸಿದ್ದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿ, ಯಕೃತ್ ತೆಗೆದುಕೊಂಡು ಹೋಗಿದ್ದಾರೆ. [ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]
ಎ.ಜೆ.ಆಸ್ಪತ್ರೆಯಿಂದ
ಮಂಗಳೂರು
ವಿಮಾನ
ನಿಲ್ದಾಣಕ್ಕೆ
ಅಂಗಾಂಗ
ಸಾಗಣೆ
ಮಾಡಲು
ಗ್ರೀನ್
ಕಾರಿಡಾರ್
ಮೂಲಕ
ಸಿಗ್ನಲ್
ಫ್ರೀ
ವ್ಯವಸ್ಥೆ
ಮಾಡಲಾಗಿತ್ತು.
ಮಂಗಳೂರು
ಸಂಚಾರಿ
ಪೊಲೀಸರು
ಅಂಬ್ಯುಲೆನ್ಸ್
ಸಾಗಲು
ವ್ಯವಸ್ಥೆ
ಮಾಡಿಕೊಟ್ಟರು.
[ಸಾವಿನ
ಬಳಿಕ
ಮತ್ತೊಂದು
ಜೀವಕ್ಕೆ
ಚೇತನ
ತುಂಬಿದ
ಚೇತನ್]
ಮಂಗಳೂರಿನ ಮಂಜೇಶ್ವರದ ನಿವಾಸಿ ಕೃಷ್ಣಮೂಲ್ಯ ಹಾಗು ಗೀತಾ ದಂಪತಿಯ ಪುತ್ರ ವಿನೀತ್ ರಾಜ್. ಎಲೆಕ್ಟ್ರಿಷಿಯನ್ ಆಗಿದ್ದರು. ಮಂಗಳವಾರ ಕಟ್ಟಡವೊಂದರ 2ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟಕ್ಕೆ ತೆರಳುವಾಗ ಕಾಲು ಜಾರಿ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದರು.
3ನೇ ಬಾರಿ ದಾನ : ಮಂಗಳೂರಿನಿಂದ ಬೆಂಗಳೂರಿಗೆ ಮೂರನೇ ಬಾರಿ ಅಂಗಾಂಗಗಳನ್ನು ದಾನ ಮಾಡಲಾಗುತ್ತಿದೆ. 2015ರ ಏಪ್ರಿಲ್ 13ರಂದು ಮೊದಲ ಬಾರಿಗೆ ಮಂಗಳೂರಿನಿಂದ ಬೆಂಗಳೂರಿಗೆ ಅಂಗಾಂಗಗಳನ್ನು ತೆಗೆದುಕೊಂಡು ಹೋಗಲಾಗಿತ್ತು.
ಹೃದಯ,
ಅಂಗಾಂಗ
ದಾನದ
ನೆನಪುಗಳು
*
2014ರಲ್ಲಿ
ಎರಡು
ಬಾರಿ
ಬೆಂಗಳೂರಿನಿಂದ
ಚೆನ್ನೈಗೆ
ಜೀವಂತ
ಹೃದಯವನ್ನು
ಸಾಗಣೆ
ಮಾಡಲಾಗಿತ್ತು
*
2015ರ
ಜನವರಿಯಲ್ಲಿ
ಎಂಎಸ್
ರಾಮಯ್ಯ
ಆಸ್ಪತ್ರೆಯಿಂದ
ಬಿಜಿಎಸ್
ಆಸ್ಪತ್ರೆಗೆ
ಹೃದಯ
ಸಾಗಣೆ
*
2015ರ
ಫೆ.
28ರಂದು
ಬೆಂಗಳೂರಿನಿಂದ
ಹೈದರಾಬಾದ್
ಜೀವಂತ
ಹೃದಯವನ್ನು
ಸಾಗಣೆ
*
2015ರ
ಏ.13ರಂದು
ಮಂಗಳೂರಿನಿಂದ
ಜೀವಂತ
ಹೃದಯ
ಬೆಂಗಳೂರಿಗೆ
ಸಾಗಣೆ
*
2015ರ
ಜುಲೈ
23ರಂದು
ಚೇತನ್
ಹೃದಯವನ್ನು
ದಾನ
ಮಾಡಲಾಗಿತ್ತು
*
2015ರ
ಜುಲೈ
26ರಂದು
ಇಳವರಸನ್
ಹೃದಯ
ದಾನ
ಮಾಡಿದ್ದರು
*
2016ರ
ಫೆಬ್ರವರಿಯಲ್ಲಿ
ಮೈಸೂರಿನಿಂದ
ಬೆಂಗಳೂರಿಗೆ
ಅಂಗಾಂಗ
ಸಾಗಣೆ
ಮಾಡಲಾಗಿತ್ತು.