ಮಂಗಳೂರು ಜೈಲಿನಲ್ಲಿ ಅತ್ಯಾಚಾರದ ಆರೋಪಿ ನೇಣಿಗೆ ಶರಣು
ಮಂಗಳೂರು, ಸೆಪ್ಟೆಂಬರ್ 07 : ಮಂಗಳೂರಿನ ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ಕೈದಿಯನ್ನು ಕೇಶವ ಗೌಡ (38) ಎಂದು ಗುರುತಿಸಲಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿಯಾದ ಕೇಶವ ಗೌಡ ಅವರು ಬುಧವಾರ ಬೆಳಗ್ಗೆ ಜೈಲಿನ ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ಮಂಗಳೂರು ಜೈಲಿನಲ್ಲಿ ಸಿಕ್ಕಿದ್ದು ಗಾಂಜಾ, ಮೊಬೈಲ್]
ಕೇಶವ ಗೌಡ ಅವರು ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದರು ಎಂದು ತಿಳಿದುಬಂದಿದೆ.
Comments
English summary
A man committed suicide at Mangaluru district prison on Wednesday, September 7, morning. Keshava Gowda (38) is the person deceased.