ಸುಳ್ಯ: ಹೋರಿ ಹಾಯ್ದು ದೇವಾಲಯದ ಮ್ಯಾನೇಜರ್ ಸಾವು
ಸುಳ್ಯ, ಜೂನ್ ೦6: ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಸೇರಿದ ಹೋರಿಯೊಂದು ಹಾಯ್ದು ದೇವಾಲಯದ ಮ್ಯಾನೇಜರ್ ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ.
ಭಾರೀ ಗಾತ್ರದ ಹೋರಿ ಕಳೆದ 7 ವರ್ಷಗಳಿಂದ ದೇವಾಲಯದಲ್ಲಿ ಇತ್ತು. ಅದನ್ನು ದೇವಳಕ್ಕೆ ಸಂಬಂಧಪಟ್ಟ ಸಿಬ್ಬಂದಿ ನೋಡಿಕೊಳ್ಳುತ್ತಿದ್ದು, ದೇವಳದ ಮ್ಯಾನೇಜರ್ ನಾರಾಯಣ ಆಹಾರ ನೀಡುತ್ತಿದ್ದರು.[ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಸುಳ್ಯದ ಕೆಂಚಪ್ಪನ ರೋಚಕ ಕಥೆ!]
ಸೋಮವಾರ ದೇವಾಲಯದ ಸಮೀಪದಲ್ಲಿ ಮೇಯಲು ಕಟ್ಟಿ ಹಾಕಿದ್ದ ಹೋರಿಯನ್ನು ನಾರಾಯಣ ಅವರು ಪೂಜೆಯ ವೇಳೆಗೆ ದೇವಾಲಯಕ್ಕೆ ಕರೆತರಲು ಹೋಗಿದ್ದ ವೇಳೆ ಹೋರಿ ಅವರಿಗೆ ಕೊಂಬುಗಳಿಂದ ಹಾಯ್ದಿತ್ತೆನ್ನಲಾಗಿದೆ. ಇತರರು ಅದರ ಹಗ್ಗವನ್ನು ಎಳೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಗಂಭೀರವಾಗಿ ಗಾಯಗೊಂಡ ನಾರಾಯಣ ಸ್ಥಳದಲ್ಲೇ ಮೃತಪಟ್ಟರು.[ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']
ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆದು ಬಳಿಕ ಮನೆಯವರಿಗೆ ಮೃತದೇಹವನ್ನು ಬಿಟ್ಟುಕೊಡಲಾಯಿತು. ಪೈಲಾರಿನ ಕಳಂಜೇರಿಯವರಾದ ನಾರಾಯಣ ಬೆಳ್ಳಾರೆಯಲ್ಲಿ ವಾಸ್ತವ್ಯದಲ್ಲಿದ್ದರು. ಕಳೆದ 15 ವರ್ಷಗಳಿಂದ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿದ್ದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.