ಉಚಿತ ಫ್ಲೈಟ್ ಟಿಕೆಟ್ ಗೆದ್ದ ಮಂಗಳೂರು ವಿದ್ಯಾರ್ಥಿನಿ
ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಈ ಶಾಲೆಯ ಫಲಿತಾಂಶ ಗಣನೀಯ ಪ್ರಮಾಣದಲ್ಲಿ ಕುಗ್ಗಿದ ಹಿನ್ನೆಲೆಯಲ್ಲಿ ಆಫರ್ ನೀಡಲಾಗಿತ್ತು.
ಮಂಗಳೂರು : ಕಾರ್ ಸ್ಟ್ರೀಟಿನ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಚಿಂಚನ ಎಂಬಾಕೆ ಶಾಲೆಯ ವತಿಯಿಂದ ನೀಡಲಾದ 'ಬೆಂಗಳೂರಿಗೆ ಹೋಗುವ ಉಚಿತ ಫ್ಲೈಟ್ ಟಿಕೆಟ್' ಬಹುಮಾನಕ್ಕೆ ಪಾತ್ರಳಾಗಿದ್ದಾಳೆ.
ಶಾಲೆಯಲ್ಲಿ ಓದುತ್ತಿರುವ ಬಡ ಹೆಣ್ಣು ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸುವ ಮಾಡಿದ ವಿದ್ಯಾರ್ಥಿನಿಯೊಬ್ಬರಿಗೆ ಬೆಂಗಳೂರಿಗೆ ತೆರಳುವ ವಿಮಾನವೊಂದರ ಟಿಕೆಟ್ ನೀಡುವುದಾಗಿ ಶಾಲೆಯ ಪ್ರಾಂಶುಪಾಲರು ಘೋಷಿಸಿದ್ದರು.
ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಈ ಶಾಲೆಯ ಫಲಿತಾಂಶ ಗಣನೀಯ ಪ್ರಮಾಣದಲ್ಲಿ ಕುಗ್ಗಿದ ಹಿನ್ನೆಲೆಯಲ್ಲಿ ಆಫರ್ ನೀಡಲಾಗಿತ್ತು.
ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 93ರಷ್ಟು ಫಲಿತಾಂಶ ಶಾಲೆಗೆ ಸಿಕ್ಕಿದೆ. ಆದರೆ, ಅತಿ ಹೆಚ್ಚು ಅಂಕ ಗಳಿಸಿದ ಚಿಂಚನ, ಶಾಲೆಯ ಬಹುಮಾನಕ್ಕೆ ಪಾತ್ರಳಾಗಿದ್ದಾಳೆ.
ಆಕೆಯೊಂದಿಗೆ, ಶಾಲೆಯ ಒಬ್ಬ ಶಿಕ್ಷಕಿಯನ್ನು ಬೆಂಗಳೂರಿಗೆ ವಿಮಾನದಲ್ಲಿ ಕಳುಹಿಸಲಾಗುತ್ತದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ತಿಳಿಸಿದ್ದಾರೆ.
{promotion-urls}