ಬಾಳಿಗಾ ಹತ್ಯೆ: ನರೇಶ್ ಶೆಣೈಗೆ ಮಂಪರು ಪರೀಕ್ಷೆ ಬೇಡ: ಕೋರ್ಟ್
ಮಂಗಳೂರು, ಸೆ. 24: ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಪಿ . ಬಾಳಿಗಾ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ರಿಲೀಫ್ ಸಿಕ್ಕಿದೆ. ಶೆಣೈಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಲು ಕೋರಿದ್ದ ಅರ್ಜಿಯನ್ನು ಮಂಗಳೂರಿನ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ನರೇಶ್
ಶೆಣೈಯ
ಮಂಪರು
ಪರೀಕ್ಷೆಗೆ
ಅವಕಾಶ
ನೀಡುವಂತೆ
ಪ್ರಕರಣದ
ತನಿಖಾಧಿಕಾರಿಗಳು
ಮಂಗಳೂರಿನ
2
ನೇ
ಪ್ರಥಮ
ದರ್ಜೆ
ನ್ಯಾಯಾಲಯಕ್ಕೆ
ಅರ್ಜಿ
ಸಲ್ಲಿಸಿದ್ದರು.
ಆದರೆ
ಈ
ನ್ಯಾಯಾಲಯವು
ಮಂಪರು
ಪರೀಕ್ಷೆಗೆ
ಅವಕಾಶ
ನೀಡದೆ
ಅರ್ಜಿಯನ್ನು
ತಿರಸ್ಕರಿಸಿತ್ತು.
ಇದರ
ವಿರುದ್ಧ
ಮೃತ
ವಿನಾಯಕ
ಬಾಳಿಗಾರ
ತಂದೆ
ರಾಮಚಂದ್ರ
ಬಾಳಿಗಾ
1ನೇ
ಹೆಚ್ಚುವರಿ
ಸೆಷನ್ಸ್
ನ್ಯಾಯಾಲಯಕ್ಕೆ
ಮಂಪರು
ಪರೀಕ್ಷೆಗೆ
ಅವಕಾಶ
ಕೋರಿ
ಮತ್ತೆ
ಅರ್ಜಿ
ಸಲ್ಲಿಸಿದ್ದರು.
[ಜೈಲಿನಿಂದ
ಹೊರ
ಬಂದ
ನರೇಶ್
ಸ್ವಾಗತಿಸಿದ
ಚಕ್ರವರ್ತಿ]
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಮಂಪರು ಪರೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿತ್ತು. ಆದರೆ ಸೆ. 19ರಂದು ನರೇಶ್ ಶೆಣೈ ಷರತ್ತು ಬದ್ದ ಜಾಮೀನು ಪಡೆದು ಹೊರಬಂದಿದ್ದಾರೆ.
2016ರ ಮಾರ್ಚ್ 21ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಬಳಿ ಆರ್ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆ ನಡೆದಿತ್ತು. ಹತ್ಯೆಯ ಪ್ರಮುಖ ಆರೋಪಿ ನರೇಶ್ ಶೆಣೈ ಮೂರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದರು.
ಎರಡು ಬಾರಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡಿತ್ತು. ನಂತರ ಹೆಜಮಾಡಿಯಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಆಗಸ್ಟ್ 9ರಂದು ಜಾಮೀನು ಅರ್ಜಿ ತಿರಸ್ಕೃತಗೊಂಡಿತು. ಆದರೆ, ಹೈಕೋರ್ಟಿನಲ್ಲಿ ಷರತ್ತುಬದ್ಧ ಜಾಮೀನು ಮಂಜೂರಾದ್ದರಿಂದ ಜೈಲಿನಿಂದ ಬಿಡುಗಡೆಯಾಗಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ