ಮಂಗಳೂರಿಗೆ ಬಂದಿದೆ ಸೈನ್ಸ್ ಎಕ್ಸ್ಪ್ರೆಸ್ ರೈಲು
ಮಂಗಳೂರು, ಮಾರ್ಚ್ 28 : ಹವಾಮಾನ ವೈಪರೀತ್ಯದ ಪರಿಣಾಮಗಳು, ಸೂಕ್ಷ್ಮ ಮತ್ತು ಸ್ಥೂಲ ಬ್ರಹ್ಮಾಂಡ ದರ್ಶನ ನೀಡುವ 'ವೈಜ್ಞಾನಿಕ ರೈಲು' ಮಂಗಳೂರಿಗೆ ಬಂದಿದೆ. ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರು ಉಚಿತವಾಗಿ ಇದನ್ನು ವೀಕ್ಷಣೆ ಮಾಡಬಹುದಾಗಿದೆ.
ಹವಾಮಾನದಲ್ಲಿ
ಉಂಟಾಗುತ್ತಿರುವ
ಬದಲಾವಣೆಯ
ಕುರಿತು
ತಿಳಿಸುವ
ಧ್ಯೇಯವಾಕ್ಯದೊಂದಿಗೆ
ಹೊರಟಿರುವ
ವೈಜ್ಞಾನಿಕ
ರೈಲು
(ಸೈನ್ಸ್
ಎಕ್ಸ್ಪ್ರೆಸ್
ಕ್ಲೈಮೆಂಟ್
ಆಕ್ಷನ್
ಸ್ಪೆಷಲ್)
2015-16ನೇ
ಸಾಲಿನಲ್ಲಿ
ಈಗಾಗಲೇ
ದೇಶದ
ಪ್ರಮುಖ
51
ನಗರಗಳಲ್ಲಿ
ಪ್ರದರ್ಶನ
ನೀಡಿದ್ದು
ಮಾ.
28ರವರೆಗೆ
ಮಂಗಳೂರಿನಲ್ಲಿರಲಿದೆ.
[ಮಂಗಳೂರಿನ
ವೆನ್ಲಾಕ್
ಆಸ್ಪತ್ರೆಗೆ
'ಕಾಯಕಲ್ಪ'
ಪ್ರಶಸ್ತಿ
ಗರಿ]
ಪರಿಸರದ ಕುರಿತು ಜನರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ಈ ರೈಲಿನಲ್ಲಿ ಒಟ್ಟು 11 ಬೋಗಿಗಳಿವೆ. ಬರಹ-ಚಿತ್ರಗಳು, ಟಿವಿ ಸ್ಕ್ರೀನ್ ನಲ್ಲಿ ದೃಶ್ಯಗಳು, ಮಾಹಿತಿಗಳು, ಪ್ರಾತ್ಯಕ್ಷಿಕೆಗಳನ್ನು ರೈಲಿನಲ್ಲಿ ವೀಕ್ಷಿಸಬಹುದಾಗಿದೆ. ಮಾಹಿತಿಯನ್ನು ಸರಳವಾಗಿ ವಿವರಿಸಲು ಪ್ರತಿ ಬೋಗಿಯಲ್ಲಿಯೂ ಇಬ್ಬರು ಮಾಹಿತಿದಾರರಿದ್ದಾರೆ. [ಅಮೆರಿಕದಲ್ಲಿ ಶತಮಾನದ ದಾಖಲೆ ಬರೆದ ಹಿಮಮಾರುತ]
50
ಸಿಬ್ಬಂದಿಗಳ
ವಿವರಣೆ
:
ವಿಕ್ರಮ
ಎ.
ಸಾರಾಬಾಯಿ
ಕಮ್ಯುನಿಟಿ
ಸೈನ್ಸ್
ಸೆಂಟರ್
ಸಿಬ್ಬಂದಿಗಳು
ಈ
ರೈಲಿನಲ್ಲಿ
ಮಾಹಿತಿ
ನೀಡುತ್ತಿದ್ದಾರೆ.
'ರೈಲಿನಲ್ಲಿ
ಒಟ್ಟೂ
50
ಸಿಬ್ಬಂದಿಗಳಿದ್ದೇವೆ,
ಊಟ
ನಿದ್ದೆ,
ಕೆಲಸ
ಎಲ್ಲಾ
ರೈಲಿನಲ್ಲಿಯೇ'
ಎನ್ನುತ್ತಾರೆ
ರಾಜಸ್ತಾನ್
ನ
ದಿನೇಶ್
ಕುಮಾರ್
ಹಾಗೂ
ಪಶ್ಚಿಮ
ಬಂಗಾಳದ
ಅಮಲ್
ಕುಂದ್.
[ಪ್ರಧಾನಿ
ನರೇಂದ್ರ
ಮೋದಿ
ಪ್ಯಾರಿಸ್
ಭಾಷಣದ
ಹೈಲೈಟ್ಸ್]
ವೈಜ್ಞಾನಿಕ ರೈಲಿನಲ್ಲಿ 16 ಬೋಗಿಗಳಿವೆ. ಇವುಗಳ ಪೈಕಿ 11 ಬೋಗಿಗಳಲ್ಲಿ ವಸ್ತು ಪ್ರದರ್ಶನವಿದ್ದರೆ, ಉಳಿದ ಬೋಗಿಗಳಲ್ಲಿ ನಮ್ಮ ವಸತಿ ಹಾಗೂ ಇತರ ವ್ಯವಸ್ಥೆಗಳಿವೆ. ರೈಲಿನ ಹೊರಗಡೆಯೂ ಪ್ರದರ್ಶನ ಕುರಿತು ಮೈಕ್ನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ.
ಈ
ರೈಲು
30
ರಾಜ್ಯಗಳ
64
ಕಡೆಗಳಲ್ಲಿ
ಪ್ರದರ್ಶನ
ನೀಡಲಿದೆ.
ಒಟ್ಟು
19,800
ಕಿ.ಮೀ.
ಸಂಚಾರದ
ಮೂಲಕ
ಹವಾಮಾನ
ಬದಲಾವಣೆಯ
ಕುರಿತು
ಸಂದೇಶ
ನೀಡಲಿದೆ.
ಈವರೆಗೆ
ರೈಲು
1,22,000
ಕಿ.ಮೀ.ಗಳನ್ನು
ಸಂಚರಿಸಿದ್ದು,
1.33
ಕೋಟಿಗೂ
ಅಧಿಕ
ವೀಕ್ಷಕರು
ರೈಲಿನಲ್ಲಿ
ಪ್ರದರ್ಶನ
ವೀಕ್ಷಿಸಿದ್ದಾರೆ.
1,404
ದಿನಗಳಲ್ಲಿ
ಈ
ರೈಲು
391
ರೈಲ್ವೆ
ಜಂಕ್ಷನ್ಗಳಲ್ಲಿ
ವಾಸ್ತವ್ಯ
ಹೂಡಿ
ಪ್ರದರ್ಶನ
ನೀಡಿದೆ.
ವಿದ್ಯಾರ್ಥಿಗಳ ದಂಡು : ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಮೊದಲ ದಿನವೇ ವಿದ್ಯಾರ್ಥಿಗಳ ಸಾರ್ವಜನಿಕರ ದಂಡು ಹರಿದುಬಂದಿತ್ತು. ಹಲವಾರು ಬಸ್ಗಳಲ್ಲಿ ಶಾಲಾ-ಕಾಲೇಜುಗಳಿಂದ ಮಕ್ಕಳನ್ನು ಕರೆ ತರಲಾಗಿತ್ತು. ಪ್ರದರ್ಶನ ವೀಕ್ಷಿಸಿದವರು ಇದೊಂದು ಅದ್ಭುತ ಪ್ರದರ್ಶನ ಪ್ರತಿಯೊಬ್ಬರು ವೀಕ್ಷಿಸಬೇಕಾದ ಅಪರೂಪದ ಪ್ರದರ್ಶನವಿದು ಎಂದು ಹೇಳಿದರು.