ದಕ್ಷಿಣ ಕನ್ನಡದಲ್ಲಿ ಜೂನ್ 15ರಿಂದ ಮರಳುಗಾರಿಕೆ ನಿಷೇಧ
ಮಂಗಳೂರು, ಜೂನ್ 07 : ದಕ್ಷಿಣ ಕನ್ನಡದಲ್ಲಿ ಜೂನ್ 15ರಿಂದ ಮರಳು ಗಣಿಗಾರಿಕೆ ನಿಷೇಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಹೇಳಿದ್ದಾರೆ. ಮುಂಗಾರು ಮಳೆಯ ಹಿನ್ನಲೆಯಲ್ಲಿ 45 ದಿನಗಳ ಕಾಲ ಮರಳುಗಾರಿಕೆ ನಿಷೇಧಿಸಲಾಗುತ್ತದೆ.
ಜಿಲ್ಲಾಧಿಕಾರಿಗಳ
ಕಚೇರಿಯಲ್ಲಿ
ಮಂಗಳವಾರ
ಮುಂಗಾರು
ಮಳೆಗೆ
ಸಂಬಂಧಿಸಿದಂತೆ
ಸಭೆ
ನಡೆಸಿದ
ಜಿಲ್ಲಾಧಿಕಾರಿ
ಎ.ಬಿ.
ಇಬ್ರಾಹಿಂ
ಅವರು,
'ಮರಳುಗಾರಿಕೆ
ನಿಷೇಧಿಸುವ
ಹಿನ್ನೆಲೆಯಲ್ಲಿ
9
ದಿನಗಳೊಳಗೆ
ಮಂಗಳೂರು
ಮಹಾನಗರ
ಪಾಲಿಕೆ,
ಪಿಡಬ್ಲ್ಯೂಡಿಗೆ
ಅಗತ್ಯವಿರುವ
ಮರಳನ್ನು
ಸಂಗ್ರಹಿಸಿಟ್ಟುಕೊಳ್ಳಬೇಕು'
ಎಂದು
ಸೂಚನೆ
ನೀಡಿದರು.
[ಮಂಗಳೂರಲ್ಲಿ
ಅಕ್ರಮ
ಮರಳು
ದಂಧೆಗೆ
ಇಲ್ಲ
ಕಡಿವಾಣ]
ಮಂಗಳೂರು ನಗರದಲ್ಲಿ ನಡೆಯುತ್ತಿರುವ ಆಸ್ಪತ್ರೆ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಮರಳಿನ ಕೊರತೆ ಎದುರಾಗಬಾರದು. ಈ ಬಗ್ಗೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]
ಅಕ್ರಮ ತಡೆಯಲು ಕ್ರಮ : ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಾಗಣೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಆಯಾ ತಾಲೂಕು ಮಟ್ಟದಲ್ಲಿ ಎಂಟು ತಂಡಗಳನ್ನು ರಚನೆ ಮಾಡಿ ಅಧಿಕಾರ ಇರುವ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. [ಅಕ್ರಮ ಮರಳು ಸಾಗಾಟಕ್ಕೆ ಹೊಸ ತಂತ್ರ!]
ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ತಂಡಗಳು ರಾತ್ರಿ ಪಾಳಿಯಲ್ಲಿ ಕಾರ್ಯವನ್ನು ಆರಂಭಿಸಬೇಕು. ಇಲ್ಲವಾದಲ್ಲಿ ದೂರು ಬಂದಲ್ಲಿ ಸಂಬಂಧಪಟ್ಟ ತಂಡಗಳನ್ನೇ ಹೊಣೆಯನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.