'ಕಾಯ್ದೆ ಸರಿಯಾಗಿ ತಿಳಿದುಕೊಂಡು ರಾಹುಲ್ ಮಾತನಾಡಲಿ'
ಮಂಗಳೂರು, ಮೇ.4: ಸದಾ ನುಗುಮುಖದಿಂದ ಇರುವ ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಭೂ ಸ್ವಾಧೀನ ಕಾಯ್ದೆಯನ್ನು ಟೀಕೆ ಮಾಡುವ ರಾಹುಲ್ ಮೊದಲು ತಮ್ಮದೇ ಪಕ್ಷದಲ್ಲಿ ಯಾವ ಸ್ಥಾನ ಹೊಂದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಕಟುಕಿದ್ದಾರೆ. ಭೂಸ್ವಾಧೀನ ಕಾಯ್ದೆಯ ಆಳ-ಅರಿವನ್ನು ತಿಳಿದುಕೊಂಡು ಮಾತನಾಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.[ರಾಹುಲ್ ಪಾದಯಾತ್ರೆಗೆ ವಿಭಿನ್ನ ಪ್ರತಿಕ್ರಿಯೆ]
ಎನ್ ಡಿಎ ಸರ್ಕಾರ ಬಿಲ್ ಮೂಲಕ ರೈತರಿಗೆ ಮೋಸ ಮಾಡಲು ಹೊರಟಿದೆ. ವಾಮಮಾರ್ಗದ ಮೂಲಕ ಸಂಸತ್ತಿನ ಅನುಮೋದನೆ ಪಡೆಯಲು ಬಿಜೆಪಿ ಮುಂದಾಗಿದೆ ಎಂದು ರಾಹುಲ್ ಗಂಭೀರ ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಯಾವುದೇ ವಿಷಯದ ಕುರಿತು ಅಧ್ಯಯನ ಮಾಡದೇ ಮಾತನಾಡಬಾರದು. ಆದರೆ ರಾಹುಲ್ ಗಾಂಧಿ ಇದಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ. ಭೂ ಸ್ವಾಧೀನ ಕಾಯ್ದೆ ಬಗ್ಗೆ ಏನನ್ನೂ ತಿಳಿದುಕೊಳ್ಳದೇ ಸಂಸತ್ ನಲ್ಲಿ ಮಾತನಾಡುತ್ತಿದ್ದಾರೆ ಎಂದು ಗೌಡ ಆರೋಪ ಮಾಡಿದ್ದಾರೆ.