ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪು ದೀಪ ನಿಷೇಧ: ಸಚಿವ ರಮಾನಾಥ ರೈಗೆ ಆದೇಶ ಬಂದಿಲ್ವಾ?

ರಾಜ್ಯದಲ್ಲಿ ಕೆಲ ಮಂತ್ರಿಗಳು ವಾಹನಕ್ಕೆ ಅಳವಡಿಸಿದ ದೀಪಗಳನ್ನು ಇನ್ನೂ ತೆಗೆದೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಕೂಡಾ ಸೈರನ್ ಹಾಕಿಕೊಂಡೇ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 26 : ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡಲು ಕೇಂದ್ರ ಸಂಪುಟ ಜಾರಿಗೆ ತಂದ ಕೆಂಪು ಗೂಟದ ಕಾರು ನಿಷೇಧದ ನಿಯಮ ಹಲವೆಡೆ ರಾಜಕಾರಣಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಮುಂದೆ ಮಂತ್ರಿಗಳು, ಅಧಿಕಾರಿಗಳು ವಾಹನದಲ್ಲಿ ಕೆಂಪು ದೀಪವಿರಬಾರದು ಎಂದು ಕೇಂದ್ರ ಸರಕಾರ ಆದೇಶಿಸಿತ್ತು. ಆದ್ರೆ, ರಾಜ್ಯದಲ್ಲಿ ಕೆಲ ಮಂತ್ರಿಗಳು ವಾಹನಕ್ಕೆ ಅಳವಡಿಸಿದ ದೀಪಗಳನ್ನು ಇನ್ನೂ ತೆಗೆದೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಕೂಡಾ ಸೈರನ್ ಹಾಕಿಕೊಂಡೇ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.[ಸಿದ್ದರಾಮಯ್ಯ ಕಾರಿನ ಕೆಂಪು ದೀಪ ತೆಗೆದವರ್ಯಾರು..?!]

Red beacon is still in Ramanath Rai's car

ಈ ಬಗ್ಗೆ ಮಂಗಳೂರಿನಲ್ಲಿಂದು ಪತ್ರಕರತರು ಕೇಳಿದ ಪ್ರಶ್ನೆಗೆ, 'ಕೇಂದ್ರ ಸರಕಾರ ಕೇವಲ ಪತ್ರಿಕೆಯಲ್ಲಿ ಮಾತ್ರವೇ ಪ್ರಕಟಣೆ ನೀಡಿದೆ. ಆದರೆ, ಲಿಖಿತವಾಗಿ ತಮಗೆ ಯಾವುದೇ ಆದೇಶ ಬಂದಿಲ್ಲ. ತಾನು ಕಾನೂನು ಉಲ್ಲಂಘಿಸುವವನಲ್ಲ. ಆದೇಶದ ಪ್ರತಿ ಕೈಸೇರಿದ ಕೂಡಲೇ ಕಾರಿನ ಕೆಂಪು ದೀಪವನ್ನು ತೆಗೆಸುತ್ತೇನೆ' ಎಂದು ಸಚಿವ ರಮಾನಾಥ್ ರೈ ಪ್ರತಿಕ್ರಿಯಿಸಿದ್ದಾರೆ.

English summary
Many chief ministers support the central government's order of ban on red beacons. But still some ministers in Karnataka are not supporting it. A minister from Mangalore Ramanath Rai is also not following the new order. Red beacon is still in his car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X