ಪುತ್ತೂರಲ್ಲಿ 5ನೇ ಕರ್ನಾಟಕ ಗಡಿನಾಡ ಸಮ್ಮೇಳನ
ಪುತ್ತೂರು, ಮೇ 24: ಪಟ್ಟಣದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಆತಿಥ್ಯದಲ್ಲಿ 5ನೇ ಕರ್ನಾಟಕ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ- 2016, ಜೂನ್ 4ರಂದು ನಡೆಯಲಿದೆ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ಡಾ.ಶಿವರಾಮ ಕಾರಂತ ಮಹಾದ್ವಾರದ ಬಿ.ಎಂ.ಇದಿನಬ್ಬ ಸಭಾಂಗಣದ ಕಯ್ಯಾರ ಕಿಂಞಣ್ಣ ರೈ ವೇದಿಕೆಯಲ್ಲಿ ಸಮ್ಮೇಳನ ಜರುಗಲಿದೆ.
ಸುದ್ದಿಗೋಷ್ಠ ಯಲ್ಲಿ ಮಾತನಾಡಿದ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ , ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ವತಿಯಿಂದ ರಾಮಕೃಷ್ಣ ಪ್ರೌಢಶಾಲೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅರಣ್ಯ ಮತ್ತು ಪರಿಸರ ಇಲಾಖೆ, ತುಳು ಸಾಹಿತ್ಯ ಅಕಾ ಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.[ಹ್ಯೂಸ್ಟನ್ನಲ್ಲಿ ಕಂಚಿನ ಪದಕ ಗೆದ್ದ ಪುತ್ತೂರಿನ ಹುಡುಗಿ]
ಜೂನ್ 4ರಂದು ಬೆಳಿಗ್ಗೆ ಧರ್ಮಸ್ಥಳ ಭಜನಾ ಪರಿಷತ್ ಅಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ, ರಾಮಕೃಷ್ಣ ಕಾಟುಕುಕ್ಕೆ ದಾಸ ಸಾಹಿತ್ಯ ಸಂಗಮ ನಡೆಸಿಕೊಡ ಲಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಪುತ್ತೂರಿನ ಸೇಂಟ್ ವಿಕ್ಟರ್ಸ್ ಶಾಲಾ ವಠಾರದಿಂದ ಮೆರವಣಿಗೆ ನಡೆಯಲಿದೆ. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.[ ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ವಿವಾದಕ್ಕೆ ತೆರೆ ಎಳೆದ ಹೈಕೋರ್ಟ್]
ಸಾಹಿತ್ಯ ಸಮ್ಮೇಳನವನ್ನು ಮೀನುಗಾರಿಕಾ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಸಮ್ಮೇಳ ನಾಧ್ಯಕ್ಷತೆ ವಹಿಸಲಿದ್ದಾರೆ. ಗಡಿನಾಡ ಧ್ವನಿ ಪ್ರಶಸ್ತಿ ಪ್ರದಾನ, ಕನ್ನಡ ಧ್ವನಿ ಪ್ರಶಸ್ತಿ ಪ್ರದಾನ ಸಮಾರಂಭವೂ ಇದೇ ವೇಳೆ ನಡೆಯಲಿದೆ ಎಂದು ತಳಿಸಿದರು.
ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಮಹ ಮ್ಮದ್ ಹಾಜಿ ಕುಕ್ಕುವಳ್ಳಿ, ಅಧ್ಯಕ್ಷ ಎಸ್. ಅಬೂಬಕ್ಕರ್ ಆರ್ಲಪದವು, ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಕಡಂ ದೇಲು, ಸದಸ್ಯ ಶಾಫಿ ಕೇಕನಾಜೆ ಮತ್ತು ಶ್ರೀರಾಮಕೃಷ್ಣ ಪ್ರೌಢಶಾಲಾ ಮುಖ್ಯಗುರು ಮನೋಹರ ರೈ ಉಪಸ್ಥಿತರಿದ್ದರು.
ವಿಚಾರ
ಸಂಕಿರಣ
ಸಭಾ
ಕಾರ್ಯಕ್ರಮದ
ಬಳಿಕ
ಗಡಿನಾಡು-
ಹೊರನಾಡು
ಕನ್ನಡಿಗರ
ಸವಾಲು,
ಕನ್ನಡ
ಭಾಷಾ
ಅಲ್ಪಸಂಖ್ಯಾತರ
ಮತ್ತು
ಗಡಿನಾಡ
ಸಮಸ್ಯೆ
ಕುರಿತು
ರಾಷ್ಟ್ರೀಯ
ವಿಚಾರ
ಸಂಕಿರಣ
ನಡೆಯಲಿದೆ.
ಮಧ್ಯಾಹ್ನ
2ಕ್ಕೆ
ಕರ್ನಾಟಕ
ರಕ್ಷಣಾ
ವೇದಿಕೆ
ಸ್ವಾಭಿಮಾನಿ
ಬಣದ
ಜಿಲ್ಲಾ
ಘಟಕದ
ಉದ್ಘಾಟನೆ
ಮತ್ತು
ಜಾಗೃತಿ
ಸಮಾವೇಶ
ಸಹ
ನಡೆಯಲಿದ್ದು
ಸಾಹಿತ್ಯಾಭಿಮಾನಿಗಳು
ಪಾಲ್ಗೊಳ್ಳುವಂತೆ
ಕೋರಲಾಗಿದೆ.