ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯ ನೆಲದಲ್ಲಿ ತಮಿಳುನಾಡು ಓಲೆಬೆಲ್ಲ

By ಐಸ್ಯಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಡಿಸೆಂಬರ್ 7: ತಾಳೆ ಬೆಲ್ಲ ಬಹಳ ಔಷಧೀಯ ಗುಣಗಳನ್ನು ಹೊಂದಿದೆ. ಈ ಕಾರಣದಿಂದಲೇ ಈ ಬೆಲ್ಲವನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಳೆ ಬೆಲ್ಲ ಕೊಂಡುಕೊಳ್ಳಬೇಕೆಂದರೆ ಎಲ್ಲೆಲ್ಲೋ ಹುಡುಕಾಡಬೇಕಾಗಿದೆ. ಆದರೆ ಈಗ ಈ ಹುಡುಕಾಟಕ್ಕೆ ತೆರೆ ಎಳೆಯುವುದಕ್ಕಾಗಿಯೋ ಅನ್ನುವಂತೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಗುಡಿ ಕೈಗಾರಿಕೋದ್ಯಮಿಗಳು ತಾವು ತಯಾರಿಸಿದ ಬೆಲ್ಲದೊಂದಿಗೆ ದ.ಕ, ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ.

ನಗರದ ಕುಲಶೇಖರ, ನಂತೂರು, ಪಡೀಲ್, ಕಣ್ಣೂರು, ಅಡ್ಯಾರು, ಪರಂಗಿಪೇಟೆ ಮುಂತಾದೆಡೆ ಈ ತಾಳೆ ಬೆಲ್ಲ ಮಾರಾಟವಾಗುತ್ತಿದೆ.[ಮೂಡಬಿದ್ರೆ: ಬ್ಲೂಸ್ ಚಾಕಲೇಟಿನಲ್ಲಿ ಸಿಕ್ತು ಜೀವಂತ ಹುಳು]

Palm jaggery sellers from Tamilnadu now enter mangaluru

ತಮಿಳುನಾಡಿನಿಂದ ಬಂದಿರುವ ಔಷಧಿಯ ಗುಣ ಹೊಂದಿರುವ ಈ ತಾಳೆಬೆಲ್ಲಕ್ಕೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಈಗಾಗಲೇ ಅಲಲ್ಲಿ ಅಪರೂಪಕ್ಕೆ ಕಾಣ ಸಿಗುವ ಬೆಲ್ಲವನ್ನು ಖರೀದಿಸುವವರಿದ್ದಾರೆ. ತಮಿಳುನಾಡಿನ ಗುಡಿ ಕೈಗಾರಿಕೋದ್ಯಮಿಗಳು ತಾವು ತಯಾರಿಸಿದ ಸಾಂಪ್ರದಾಯಿಕ ಬೆಲ್ಲ ಮಾತ್ರವಲ್ಲದೆ ಕಾಳು ಮೆಣಸು , ಶುಂಟಿ ಮಿಶ್ರಿತ ಬೆಲ್ಲವನ್ನೂ ನಗರದೆಲ್ಲೆಡೆ ಮಾರಾಟ ಮಾಡುತ್ತಿದ್ದಾರೆ.

Palm jaggery sellers from Tamilnadu now enter mangaluru

ಬೆಲ್ಲ ಸವಿಯ ಬಯಸುವವರು ನೇರವಾಗಿ ,ಮಾರಾಟಗಾರರ ಬಳಿ ಸಾಗಿ ಬೆಲ್ಲ ಖರೀದಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದಲ್ಲದೆ ಈ ಬೆಲ್ಲದ ಮಾರಾಟಗಾರರು ಉಭಯ ಜಿಲ್ಲೆಗಳಲ್ಲಿ ಬೆಲ್ಲ ಮಾರಿ ಲಾಭವನ್ನು ಕಂಡುಕೊಳ್ಳುತ್ತಿದ್ದಾರೆ.

Palm jaggery sellers from Tamilnadu now enter mangaluru

ಓಲೆಬೆಲ್ಲದ ತಯಾರಿಕೆ:
ತಮಿಳುನಾಡಿನ ತಿರುಚಂದೂರು ಅನ್ನುವ ಗ್ರಾಮಕ್ಕೆ ಸೇರಿದ ಗುಡಿ ಕೈಗಾರಿಕೋದ್ಯಮಿಗಳು ಬೆಲ್ಲ ತಯಾರಿಕೆಯಲ್ಲಿ ಅಗ್ರ ಸ್ಥಾನದಲ್ಲಿ ಇದ್ದಾರೆ. ಈ ಬೆಲ್ಲವನ್ನು ತಾಳೆ, ತೆಂಗು, ಈಚಲು ಮರದಿಂದ ಅಲ್ಪ ಪ್ರಮಾಣದಲ್ಲಿ ಸುಣ್ಣ ಬೆರೆಸಿದ ಶೇಂದಿ ತೆಗೆದು ಅದನ್ನು ಮನೆಯಲ್ಲಿ ಬಾಣಲೆಗೆ ಸುರಿದು 4 ರಿಂದ 5 ಗಂಟೆಗಳ ಕಾಲ ಕುದಿಸಾಲಾಗುತ್ತದೆ. ಬಳಿಕ ಅದು ಕಂದು ಬಣ್ಣಕ್ಕೆ ಬದಲಾಯಿಸಿ, ದಪ್ಪವಾದಾಗ ಒಲೆಯಿಂದ ತೆಗೆದು ಬೆಲ್ಲದ ಅಚ್ಚಿಯಲ್ಲಿ ಸುರಿಯಲಾಗುತ್ತದೆ. ಸುಮಾರು 3 ಗಂಟೆಗಳ ಬಳಿಕ ಸೂಕ್ಷ್ಮವಾಗಿ ಬೇರ್ಪಡಿಸಲಾಗುತ್ತದೆ. ಆದರೆ ತಮಿಳುನಾಡಿನಲ್ಲಿ ತಯಾರಿಸಿದ ಬೆಲ್ಲವನ್ನು ತಮಿಳುನಾಡಿಗೆ ಮಾತ್ರ ಸೀಮಿತವಾಗಿಡದೆ ಈ ಕೈಗಾರಿಕೋದ್ಯಮಿಗಳು ವ್ಯಾವಹಾರಿಕ ದೃಷ್ಟಿಯನ್ನು ಬೇರೆ ರಾಜ್ಯಗಳತ್ತ ಹರಿಸಿದ್ದಾರೆ. ಎಲ್ಲೆಲ್ಲಿ ಈ ಬೆಲ್ಲವನ್ನು ಇಷ್ಟ ಪಡುತ್ತಾರೆ ಅಲ್ಲಲ್ಲಿ ವ್ಯವಹಾರ ವಹಿವಾಟುಗಳನ್ನು ವಿಸ್ತರಿಸುತ್ತಾ ಬರುತ್ತಿದ್ದಾರೆ.

Palm jaggery sellers from Tamilnadu now enter mangaluru
English summary
Palm jaggery sellers from Tamilnadu now enter mangaluru for their business. Peoplethrong to buy sweet jaggery at different parts of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X