ಕರಾವಳಿಯ ನೆಲದಲ್ಲಿ ತಮಿಳುನಾಡು ಓಲೆಬೆಲ್ಲ
ಮಂಗಳೂರು, ಡಿಸೆಂಬರ್ 7: ತಾಳೆ ಬೆಲ್ಲ ಬಹಳ ಔಷಧೀಯ ಗುಣಗಳನ್ನು ಹೊಂದಿದೆ. ಈ ಕಾರಣದಿಂದಲೇ ಈ ಬೆಲ್ಲವನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಳೆ ಬೆಲ್ಲ ಕೊಂಡುಕೊಳ್ಳಬೇಕೆಂದರೆ ಎಲ್ಲೆಲ್ಲೋ ಹುಡುಕಾಡಬೇಕಾಗಿದೆ. ಆದರೆ ಈಗ ಈ ಹುಡುಕಾಟಕ್ಕೆ ತೆರೆ ಎಳೆಯುವುದಕ್ಕಾಗಿಯೋ ಅನ್ನುವಂತೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಗುಡಿ ಕೈಗಾರಿಕೋದ್ಯಮಿಗಳು ತಾವು ತಯಾರಿಸಿದ ಬೆಲ್ಲದೊಂದಿಗೆ ದ.ಕ, ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ.
ನಗರದ ಕುಲಶೇಖರ, ನಂತೂರು, ಪಡೀಲ್, ಕಣ್ಣೂರು, ಅಡ್ಯಾರು, ಪರಂಗಿಪೇಟೆ ಮುಂತಾದೆಡೆ ಈ ತಾಳೆ ಬೆಲ್ಲ ಮಾರಾಟವಾಗುತ್ತಿದೆ.[ಮೂಡಬಿದ್ರೆ: ಬ್ಲೂಸ್ ಚಾಕಲೇಟಿನಲ್ಲಿ ಸಿಕ್ತು ಜೀವಂತ ಹುಳು]
ತಮಿಳುನಾಡಿನಿಂದ ಬಂದಿರುವ ಔಷಧಿಯ ಗುಣ ಹೊಂದಿರುವ ಈ ತಾಳೆಬೆಲ್ಲಕ್ಕೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಈಗಾಗಲೇ ಅಲಲ್ಲಿ ಅಪರೂಪಕ್ಕೆ ಕಾಣ ಸಿಗುವ ಬೆಲ್ಲವನ್ನು ಖರೀದಿಸುವವರಿದ್ದಾರೆ. ತಮಿಳುನಾಡಿನ ಗುಡಿ ಕೈಗಾರಿಕೋದ್ಯಮಿಗಳು ತಾವು ತಯಾರಿಸಿದ ಸಾಂಪ್ರದಾಯಿಕ ಬೆಲ್ಲ ಮಾತ್ರವಲ್ಲದೆ ಕಾಳು ಮೆಣಸು , ಶುಂಟಿ ಮಿಶ್ರಿತ ಬೆಲ್ಲವನ್ನೂ ನಗರದೆಲ್ಲೆಡೆ ಮಾರಾಟ ಮಾಡುತ್ತಿದ್ದಾರೆ.
ಬೆಲ್ಲ ಸವಿಯ ಬಯಸುವವರು ನೇರವಾಗಿ ,ಮಾರಾಟಗಾರರ ಬಳಿ ಸಾಗಿ ಬೆಲ್ಲ ಖರೀದಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದಲ್ಲದೆ ಈ ಬೆಲ್ಲದ ಮಾರಾಟಗಾರರು ಉಭಯ ಜಿಲ್ಲೆಗಳಲ್ಲಿ ಬೆಲ್ಲ ಮಾರಿ ಲಾಭವನ್ನು ಕಂಡುಕೊಳ್ಳುತ್ತಿದ್ದಾರೆ.
ಓಲೆಬೆಲ್ಲದ
ತಯಾರಿಕೆ:
ತಮಿಳುನಾಡಿನ
ತಿರುಚಂದೂರು
ಅನ್ನುವ
ಗ್ರಾಮಕ್ಕೆ
ಸೇರಿದ
ಗುಡಿ
ಕೈಗಾರಿಕೋದ್ಯಮಿಗಳು
ಬೆಲ್ಲ
ತಯಾರಿಕೆಯಲ್ಲಿ
ಅಗ್ರ
ಸ್ಥಾನದಲ್ಲಿ
ಇದ್ದಾರೆ.
ಈ
ಬೆಲ್ಲವನ್ನು
ತಾಳೆ,
ತೆಂಗು,
ಈಚಲು
ಮರದಿಂದ
ಅಲ್ಪ
ಪ್ರಮಾಣದಲ್ಲಿ
ಸುಣ್ಣ
ಬೆರೆಸಿದ
ಶೇಂದಿ
ತೆಗೆದು
ಅದನ್ನು
ಮನೆಯಲ್ಲಿ
ಬಾಣಲೆಗೆ
ಸುರಿದು
4
ರಿಂದ
5
ಗಂಟೆಗಳ
ಕಾಲ
ಕುದಿಸಾಲಾಗುತ್ತದೆ.
ಬಳಿಕ
ಅದು
ಕಂದು
ಬಣ್ಣಕ್ಕೆ
ಬದಲಾಯಿಸಿ,
ದಪ್ಪವಾದಾಗ
ಒಲೆಯಿಂದ
ತೆಗೆದು
ಬೆಲ್ಲದ
ಅಚ್ಚಿಯಲ್ಲಿ
ಸುರಿಯಲಾಗುತ್ತದೆ.
ಸುಮಾರು
3
ಗಂಟೆಗಳ
ಬಳಿಕ
ಸೂಕ್ಷ್ಮವಾಗಿ
ಬೇರ್ಪಡಿಸಲಾಗುತ್ತದೆ.
ಆದರೆ
ತಮಿಳುನಾಡಿನಲ್ಲಿ
ತಯಾರಿಸಿದ
ಬೆಲ್ಲವನ್ನು
ತಮಿಳುನಾಡಿಗೆ
ಮಾತ್ರ
ಸೀಮಿತವಾಗಿಡದೆ
ಈ
ಕೈಗಾರಿಕೋದ್ಯಮಿಗಳು
ವ್ಯಾವಹಾರಿಕ
ದೃಷ್ಟಿಯನ್ನು
ಬೇರೆ
ರಾಜ್ಯಗಳತ್ತ
ಹರಿಸಿದ್ದಾರೆ.
ಎಲ್ಲೆಲ್ಲಿ
ಈ
ಬೆಲ್ಲವನ್ನು
ಇಷ್ಟ
ಪಡುತ್ತಾರೆ
ಅಲ್ಲಲ್ಲಿ
ವ್ಯವಹಾರ
ವಹಿವಾಟುಗಳನ್ನು
ವಿಸ್ತರಿಸುತ್ತಾ
ಬರುತ್ತಿದ್ದಾರೆ.