ಮೇ 19ರ ದಕ್ಷಿಣ ಕನ್ನಡ ಬಂದ್ಗೆ ಸಂಸದರ ಬೆಂಬಲ
ಮಂಗಳೂರು, ಮೇ 16 : ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಕ್ಕೆ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಬೆಂಬಲ ನೀಡಿದ್ದಾರೆ. 'ಮೇ 19ರ ಗುರುವಾರ ನಡೆಯಲಿರುವ ಸ್ವಯಂ ಘೋಷಿತ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ' ಅವರು ತಿಳಿಸಿದ್ದಾರೆ.
ನೇತ್ರಾವತಿ
ರಕ್ಷಣಾ
ಸಂಯುಕ್ತ
ಸಮಿತಿ
ವತಿಯಿಂದ
ಮೇ
16
ರಂದು
ಬೃಹತ್
ಪ್ರತಿಭಟನೆ
ಮತ್ತು
ಮೇ
19
ರಂದು
ದಕ್ಷಿಣ
ಕನ್ನಡ
ಜಿಲ್ಲಾ
ಬಂದ್ಗೆ
ಕರೆ
ನೀಡಲಾಗಿದೆ.
ಈ
ಹೋರಾಟಗಳಿಗೆ
ಸಂಸದರು
ತಮ್ಮ
ಬೆಂಬಲ
ನೀಡಿದ್ದಾರೆ.
[ಎತ್ತಿನಹೊಳೆಗೆ
ವಿರೋಧ,
ಮೇ
19ರಂದು
ದಕ್ಷಿಣ
ಕನ್ನಡ
ಬಂದ್]
'ಎತ್ತಿನಹೊಳೆ ಯೋಜನೆಯಿಂದ ಬರ ಪೀಡಿತ ಜಿಲ್ಲೆಗಳಿಗೆ ನೀರು ಸಿಗಲು ಸಾಧ್ಯವಿಲ್ಲ ಎಂದು ಈಗಾಗಲೇ ತಜ್ಞರು ವರದಿ ನೀಡಿದ್ದಾರೆ. ಇದು ಕೇವಲ ಹಣ ಮಾಡುವ ಯೋಜನೆ ಎಂದು ಕಾಂಗ್ರೆಸ್ ಪಕ್ಷದ ನಾಯಕರೇ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ' ಎಂದು ಕಟೀಲ್ ಹೇಳಿದ್ದಾರೆ. [ಎತ್ತಿನಹೊಳೆ ಯೋಜನೆ ಬಗ್ಗೆ ಆತಂಕ ಬೇಡ : ಸಿದ್ದರಾಮಯ್ಯ]
'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಲೇ ನೀರಿನ ಸಮಸ್ಯೆ ಎದುರಾಗಿದೆ. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಹೋರಾಟವನ್ನು ಬೆಂಬಲಿಸುವ ಮೂಲಕ ಜಿಲ್ಲೆಯ ಜನತೆ ರಾಜ್ಯ ಸರ್ಕಾರಕ್ಕೆ ಸೂಕ್ತ ಎಚ್ಚರಿಕೆ ನೀಡಬೇಕೆಂದು' ಸಂಸದರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]
ಬಂದ್ ಕರೆ : ಎತ್ತಿನಹೊಳೆ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮೇ 19ರಂದು ದಕ್ಷಿಣ ಕನ್ನಡ ಬಂದ್ಗೆ ಕರೆ ನೀಡಲಾಗಿದೆ.