ಮಂಗಳೂರು-ಮುಂಬೈ ಐರಾವತ ಬಸ್ ಸೇವೆ ಸ್ಥಗಿತ
ಮಂಗಳೂರು, ಜುಲೈ 06 : ಮಂಗಳೂರು-ಮುಂಬೈ ನಡುವೆ ಸಂಚಾರ ನಡೆಸುತ್ತಿದ್ದ ಕೆಎಸ್ಆರ್ಟಿಸಿಯ ಐರಾವತ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಷ್ಟದ ಕಾರಣ ಹೇಳಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಸೆಪ್ಟೆಂಬರ್ ನಂತರ ಪುನಃ ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ಮಳೆಗಾಲ
ಆರಂಭವಾದ
ನಂತರ
ಮಂಗಳೂರು-ಮುಂಬೈ
ನಡುವೆ
ಪ್ರಯಾಣಿಸುವ
ಜನರ
ಸಂಖ್ಯೆ
ಕಡಿಮೆ
ಆಗಿದೆ.
ಆದ್ದರಿಂದ,
ಸಂಸ್ಥೆಗೆ
ನಷ್ಟ
ಉಂಟಾಗುತ್ತಿದ್ದು
ಐರಾವತ
ಹವಾನಿಯಂತ್ರಿತ
ಬಸ್
ಸೇವೆಯನ್ನು
ಸ್ಥಗಿತಗೊಳಿಸಲಾಗಿದೆ.
[KSRTC
ಪ್ರಯಾಣದರ
ಕಡಿತ]
ಮಂಗಳೂರು-ಮುಂಬೈ ನಡುವಿನ ಪ್ರತಿ ಟ್ರಿಪ್ಗೆ ಸುಮಾರು 90 ಸಾವಿರ ರೂ. ಆದಾಯ ಬರಬೇಕಿತ್ತು. ಆದರೆ, ಈಗ ಅದು 35 ಸಾವಿರಕ್ಕೆ ಕುಸಿತಗೊಂಡಿದೆ. ನಷ್ಟ ಮಾಡಿಕೊಂಡು ಬಸ್ ಓಡಿಸುವುದು ಬೇಡ ಎಂಬ ತೀರ್ಮಾನ ಕೈಗೊಂಡಿರುವ ಸಂಸ್ಥೆ ಸೇವೆ ನಿಲ್ಲಿಸಿದೆ. [ಐರಾವತ ಡೈಮಂಡ್ ಕ್ಲಾಸ್ ಬಸ್ಸಿನ ವಿಶೇಷತೆಗಳು]
ಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಕರಾದ ವಿವೇಕಾನಂದ ಹೆಗಡೆ ಅವರು ಈ ಕುರಿತು ಮಾಹಿತಿ ನೀಡಿದ್ದು, ಮುಂಗಾರು ಅವಧಿ ಮುಗಿದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಆಗ ಪುನಃ ಬಸ್ ಸೇವೆಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಹೊಸ ಬಸ್ ಸೇವೆ ಆರಂಭ : ಮಂಗಳೂರು-ಮುಂಬೈ ಮಾರ್ಗದಲ್ಲಿ ನೂತನ ಬಸ್ ಸೇವೆಯನ್ನು ಆರಂಭಿಸುವ ಉದ್ದೇಶವೂ ಕೆಎಸ್ಆರ್ಟಿಸಿ ಮುಂದಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಐರಾವತ ಡೈಮಂಡ್ ಕ್ಲಾಸ್ ಬಸ್ ಸೇವೆಗೆ ಕೆಎಸ್ಆರ್ಟಿಸಿ ಕೆಲವು ದಿನಗಳ ಹಿಂದೆ ಚಾಲನೆ ನೀಡಿದೆ. ಈ ಮಾರ್ಗದಲ್ಲಿ ಡೈಮಂಡ್ ಕ್ಲಾಸ್ ಬಸ್ ಸೇವೆ ಆರಂಭಿಸುವ ಉದ್ದೇಶವೂ ಇದೆ.