ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಮುಂಬೈ ಐರಾವತ ಬಸ್ ಸೇವೆ ಸ್ಥಗಿತ

|
Google Oneindia Kannada News

ಮಂಗಳೂರು, ಜುಲೈ 06 : ಮಂಗಳೂರು-ಮುಂಬೈ ನಡುವೆ ಸಂಚಾರ ನಡೆಸುತ್ತಿದ್ದ ಕೆಎಸ್ಆರ್‌ಟಿಸಿಯ ಐರಾವತ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಷ್ಟದ ಕಾರಣ ಹೇಳಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಸೆಪ್ಟೆಂಬರ್‌ ನಂತರ ಪುನಃ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

ಮಳೆಗಾಲ ಆರಂಭವಾದ ನಂತರ ಮಂಗಳೂರು-ಮುಂಬೈ ನಡುವೆ ಪ್ರಯಾಣಿಸುವ ಜನರ ಸಂಖ್ಯೆ ಕಡಿಮೆ ಆಗಿದೆ. ಆದ್ದರಿಂದ, ಸಂಸ್ಥೆಗೆ ನಷ್ಟ ಉಂಟಾಗುತ್ತಿದ್ದು ಐರಾವತ ಹವಾನಿಯಂತ್ರಿತ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. [KSRTC ಪ್ರಯಾಣದರ ಕಡಿತ]

ksrtc

ಮಂಗಳೂರು-ಮುಂಬೈ ನಡುವಿನ ಪ್ರತಿ ಟ್ರಿಪ್‌ಗೆ ಸುಮಾರು 90 ಸಾವಿರ ರೂ. ಆದಾಯ ಬರಬೇಕಿತ್ತು. ಆದರೆ, ಈಗ ಅದು 35 ಸಾವಿರಕ್ಕೆ ಕುಸಿತಗೊಂಡಿದೆ. ನಷ್ಟ ಮಾಡಿಕೊಂಡು ಬಸ್ ಓಡಿಸುವುದು ಬೇಡ ಎಂಬ ತೀರ್ಮಾನ ಕೈಗೊಂಡಿರುವ ಸಂಸ್ಥೆ ಸೇವೆ ನಿಲ್ಲಿಸಿದೆ. [ಐರಾವತ ಡೈಮಂಡ್ ಕ್ಲಾಸ್ ಬಸ್ಸಿನ ವಿಶೇಷತೆಗಳು]

ಕೆಎಸ್ಆರ್‌ಟಿಸಿಯ ವಿಭಾಗೀಯ ನಿಯಂತ್ರಕರಾದ ವಿವೇಕಾನಂದ ಹೆಗಡೆ ಅವರು ಈ ಕುರಿತು ಮಾಹಿತಿ ನೀಡಿದ್ದು, ಮುಂಗಾರು ಅವಧಿ ಮುಗಿದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಆಗ ಪುನಃ ಬಸ್ ಸೇವೆಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಹೊಸ ಬಸ್ ಸೇವೆ ಆರಂಭ : ಮಂಗಳೂರು-ಮುಂಬೈ ಮಾರ್ಗದಲ್ಲಿ ನೂತನ ಬಸ್ ಸೇವೆಯನ್ನು ಆರಂಭಿಸುವ ಉದ್ದೇಶವೂ ಕೆಎಸ್ಆರ್‌ಟಿಸಿ ಮುಂದಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಐರಾವತ ಡೈಮಂಡ್‌ ಕ್ಲಾಸ್‌ ಬಸ್ ಸೇವೆಗೆ ಕೆಎಸ್ಆರ್‌ಟಿಸಿ ಕೆಲವು ದಿನಗಳ ಹಿಂದೆ ಚಾಲನೆ ನೀಡಿದೆ. ಈ ಮಾರ್ಗದಲ್ಲಿ ಡೈಮಂಡ್ ಕ್ಲಾಸ್ ಬಸ್ ಸೇವೆ ಆರಂಭಿಸುವ ಉದ್ದೇಶವೂ ಇದೆ.

English summary
Karnataka road transport corporation (KSRTC) has suspended its air conditioned Airavat bus service between Mumbai and Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X