ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ
ಮಂಗಳೂರು, ಮೇ 18 : ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹೊರವಲಯದ ಕಾಂತಮಂಗಲ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು
ಅಜ್ಜಾವರ
ಗ್ರಾಮದ
ಮುಳ್ಯ
ಅಟ್ಲೂರಿನ
ರವಿರಾಜ
ಎಂಬವರ
ಪತ್ನಿ
ಕುಸುಮಾವತಿ
(40),
ಮಕ್ಕಳಾದ
ಲಿಖಿತಾ
(4),
ರಕ್ಷಿತಾ
(3)
ಹಾಗೂ
ಸುಜನ್
(2)
ಎಂದು
ಗುರುತಿಸಲಾಗಿದೆ.
ಮನೆಯ
ಸಮೀಪದ
ಪಯಸ್ವಿನಿ
ನದಿಗೆ
ಹಾರಿ
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
[ಅರ್ಧ
ಶತಕದಿಂದ
ಕಾಡಿನಲ್ಲೇ
ನೆಲೆಸಿರುವ
ಕೆಂಚಪ್ಪನ
ರೋಚಕ
ಕಥೆ!]
ಕುಸುಮಾ ಅವರ ಪತಿ ರವಿರಾಜ್ ಸುಳ್ಯದ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ರವಿರಾಜ್ ಅವರು ಕೆಲಸಕ್ಕೆ ತೆರಳಿದ್ದ ವೇಳೆ ಕುಸುಮಾ ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. [ಸಾವನ್ನಪ್ಪಿದ ಯುವಕನ ಬಳಿ 30 ಪೇಜ್ ಸೂಸೈಡ್ ನೋಟ್]
ಮಂಗಳವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸಂಜೆ ಕುಸುಮಾ ಮತ್ತು ಮಕ್ಕಳು ನಾಪತ್ತೆಯಾಗ ಬಗ್ಗೆ ಸ್ಥಳೀಯರಿಗೆ ಮಾಹಿತಿ ಲಭ್ಯವಾಗಿ ಹುಡುಕಾಟ ನಡೆಸಿದಾಗ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿ ಪೊಲೀಸರು ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಕೆವಿಜಿ ಆಸ್ಪತ್ರೆಗೆ ಸಾಗಿಸಿದರು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.