ಮಂಗಳೂರು ನಗರದಲ್ಲಿ ಮತ್ತಷ್ಟು ಸಿಗ್ನಲ್ ವ್ಯವಸ್ಥೆ
ಮಂಗಳೂರು, ಜ.28 : ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದರೂ ರಸ್ತೆಗಳು ಅಗಲಗೊಳ್ಳದೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ಸಂಚಾರ ಪೊಲೀಸರು 4 ಹೊಸ ಸಿಗ್ನಲ್ ವ್ಯವಸ್ಥೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ 10 ಜಂಕ್ಷನ್ಗಳಲ್ಲಿ ಸಿಗ್ನಲ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಿದ್ದಾರೆ.
ಸಂಚಾರ
ವಿಭಾಗದ
ಎಸಿಪಿ
ಉದಯ
ನಾಯಕ್
ಈ
ಬಗ್ಗೆ
ಮಾಹಿತಿ
ನೀಡಿದ್ದು,
ಬಲ್ಮಠದ
ವಾಸ್
ಬೇಕರಿ
ಬಳಿ,
ಬೆಂದೂರ್ವೆಲ್
ವೃತ್ತ,
ಬೆಂದೂರ್ನ
ತೋಟಗಾರಿಕೆ
ಇಲಾಖೆ
ಕಚೇರಿ
ಬಳಿ
ಮತ್ತು
ಕೆಎಸ್ಆರ್ಟಿ
ವೃತ್ತದಲ್ಲಿ
ಹೊಸ
ಸಿಗ್ನಲ್ಗಳನ್ನು
ಅಳವಡಿಸಲಾಗುತ್ತಿದೆ
ಎಂದರು.
[ವಾಹನಕ್ಕೆ
ಸುಲಭವಾಗಿ
ಫ್ಯಾನ್ಸಿ
ನಂಬರ್
ಪಡೆಯಿರಿ]
ಒಂದು ವಾರದೊಳಗೆ ಎಲ್ಲಾ 4 ಸಿಗ್ನಲ್ ಅಳವಡಿಸುವ ಕಾಮಗಾರಿಯನ್ನು ಮುಗಿಸಲಾಗುತ್ತದೆ. ಬಂಟ್ಸ್ ಹಾಸ್ಟೆಲ್- ಜ್ಯೋತಿ ವೃತ್ತ ಕಾಂಕ್ರಿಟ್ ಕಾಮಗಾರಿ ಮುಗಿದು ಸಂಚಾರ ಆರಂಭಗೊಳ್ಳುತ್ತಿದ್ದಂತೆ, ಸೋಲಾರ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ನಲ್ಲಿ ನಿರ್ಮಿಸಿರುವ ಹೊಸ ಡಿಜಿಟಲ್ ಸಿಗ್ನಲ್ ಕಾರ್ಯಾರಂಭ ಮಾಡಿ, ಸಂಚಾರ ನಿಯಂತ್ರಿಸಲಿದೆ. ಸಿಗ್ನಲ್ಗಳನ್ನು ಮೂರು ವರ್ಷ ಕಾಲ ಭಾರತ್ ಎಲೆಕ್ಟ್ರಾನಿಕ್ ನಿರ್ವಹಣೆ ಮಾಡಲಿದೆ ಎಂದು ಹೇಳಿದರು. [ಡಿಎಲ್ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಹಾಕಿ]
ಮತ್ತಷ್ಟು
ಸಿಗ್ನಲ್
:
ಮುಂದಿನ
ದಿನಗಳಲ್ಲಿ
ಕಂಕನಾಡಿಯ
ಕರಾವಳಿ
ವೃತ್ತ,
ಹಂಪನಕಟ್ಟೆ,
ಅಂಬೇಡ್ಕರ್(ಜ್ಯೋತಿ),
ಬಂಟ್ಸ್
ಹಾಸ್ಟೆಲ್
ಮತ್ತು
ಪಿವಿಎಸ್
ವೃತ್ತದಲ್ಲಿ
ಸಿಗ್ನಲ್
ಅಳವಡಿಸಲಾಗುತ್ತದೆ.
ಕರಾವಳಿ
ವೃತ್ತದಲ್ಲಿ
5
ವರ್ಷದ
ಹಿಂದೆ
ಕಂಬ
ಹಾಕಲಾಗಿತ್ತು.
ಇದೀಗ
ಅದನ್ನು
ತೆಗೆದು
ಹೊಸ
ವ್ಯವಸ್ಥೆಯಡಿ
ಅಳವಡಿಸುವ
ಯೋಜನೆ
ಇದೆ
ಎಂದು
ಮಾಹಿತಿ
ನೀಡಿದರು.
ಮಂಗಳೂರು ನಗರದ ಸಂಚಾರಿ ವ್ಯವಸ್ಥೆ ಸುಧಾರಣೆಗೆ ರಾಜ್ಯ ಸರ್ಕಾರ 5 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಅದರಲ್ಲಿ 1.25 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 44 ಲಕ್ಷ ರೂ. ವೆಚ್ಚದಲ್ಲಿ ಸಿಗ್ನಲ್ ಅಳವಡಿಸಲಾಗುತ್ತಿದೆ ಎಂದು ಉದಯ ನಾಯಕ್ ತಿಳಿಸಿದರು.