ಮಂಗಳೂರಿನ 8 ಮಾರುಕಟ್ಟೆಗಳಿಗೆ ನವೀಕರಣ ಭಾಗ್ಯ
ಮಂಗಳೂರು, ಜೂ. 29 : ಮಂಗಳೂರು ನಗರದ 8 ಮಾರುಕಟ್ಟೆಗಳ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಮುಂದಾಗಿದೆ. ಮಾರುಕಟ್ಟೆಗಳ ಅಭಿವೃದ್ಧಿಗಾಗಿ ಸುಮಾರು 312 ಕೋಟಿ ರೂ.ಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ನಗರದಲ್ಲಿರುವ
ಕೆಲವು
ಮಾರುಕಟ್ಟೆಗಳ
ಒಳಗೆ
ಹೋಗಲು
ಸಾಧ್ಯವಿಲ್ಲದ
ಪರಿಸ್ಥಿತಿ
ನಿರ್ಮಾಣವಾಗಿದೆ,
ಆದ್ದರಿಂದ
ಮಾರುಕಟ್ಟೆಗಳನ್ನು
ಅಭಿವೃದ್ಧಿಪಡಿಸಿ
ಅತ್ಯಾಧುನಿಕ
ಸೌಲಭ್ಯಗಳನ್ನು
ಒದಗಿಸಲು
ಪಾಲಿಕೆ
ತೀರ್ಮಾನ
ಕೈಗೊಂಡಿದೆ.
2
ಹಂತದಲ್ಲಿ
ಎಂಟು
ಮಾರುಕಟ್ಟೆಗಳ
ನವೀಕರಣ
ನಡೆಯಲಿದೆ.
ಮೊದಲ ಹಂತದಲ್ಲಿ ಕೇಂದ್ರ ಮಾರುಕಟ್ಟೆ, ಕದ್ರಿ, ಕಂಕನಾಡಿ ಮತ್ತು ಸುರತ್ಕಲ್ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಅಗತ್ಯವಿದ್ದರೆ ಮಾರುಕಟ್ಟೆ ಪಕ್ಕದಲ್ಲಿರುವ ಖಾಸಗಿ ಭೂಮಿಯನ್ನು ಸೇರಿಸಿಕೊಳ್ಳಲು ಯೋಜಿಸಲಾಗಿದೆ. [ಮಂಗಳೂರು ಪಾಲಿಕೆ ವಿರುದ್ಧ ವಿನೂತನ ಪ್ರತಿಭಟನೆ]
ಎರಡನೇ ಹಂತದಲ್ಲಿ ಕಾವೂರು, ಬಿಕರ್ನಕಟ್ಟೆ, ಅಳಪೆ ಹಾಗೂ ಕಾರ್ಸ್ಟ್ರೀಟ್ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಹೊಸದಾಗಿ ನಿರ್ಮಾಣವಾಗುವ ಮಾರುಕಟ್ಟೆಗಳಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳಿಗೆ ಮಳಿಗೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುತ್ತದೆ. [ಇನ್ಮುಂದೆ ತಳ್ಳುಗಾಡಿ ವ್ಯಾಪಾರಿಗಳು ಕೂಗುವಂತಿಲ್ಲ]
ರಸ್ತೆಗಳ ಅಭಿವೃದ್ಧಿ : ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಜೊತೆಗೆ ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗಲೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಪಾಲಿಕೆ ಮತ್ತು ರಾಜ್ಯ ಸರ್ಕಾರ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನವೀಕರಣಗೊಳ್ಳಲಿದೆ.