ಮಂಗಳೂರು: ನ್ಯಾಯಾಲಯ ಆವರಣದಲ್ಲೇ ಬಂಧಿತನಿಂದ ನಕ್ಸಲ್ ಘೋಷಣೆ
ನ್ಯಾಯಾಲಯದ ಆವರಣದಲ್ಲೇ ಬಂಧಿತ ನಕ್ಸಲ್ ನಾಯಕನೋರ್ವ ನಕ್ಸಲ್ ಪರ ಘೋಷಣೆ ಕೂಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದಿದೆ.
ಮಂಗಳೂರು, ಏಪ್ರಿಲ್ 5: ನ್ಯಾಯಾಲಯದ ಆವರಣದಲ್ಲೇ ಬಂಧಿತ ನಕ್ಸಲ್ ನಾಯಕನೋರ್ವ ನಕ್ಸಲ್ ಪರ ಘೋಷಣೆ ಕೂಗಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
6 ತಿಂಗಳ ಹಿಂದೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ಬಂಧನಕ್ಕೊಳಗಾಗಿದ್ದ ಚೆನ್ನಿ ರಮೇಶ್ (53) ಎಂಬಾತನನ್ನು ಕೋರ್ಟ್ ಆವರಣಕ್ಕೆ ನಿನ್ನೆ ಅಂದರೆ ಮಂಗಳವಾರ ಕರೆತರಲಾಗುತ್ತಿತ್ತು. ಚೆನ್ನಿ ಪೊಲೀಸ್ ವಾಹನದಿಂದ ಇಳಿದು ಕೋರ್ಟ್ ಆವರಣ ಪ್ರವೇಶಿಸುವವರೆಗೆ ನಕ್ಸಲ್ ಪರ ಘೋಷಣೆಗಳನ್ನು ಕೂಗಿ, ಮಾವೋ ವಿಚಾರಗಳಿಗೆ ಜೈಕಾರ ಹಾಕಿದ್ದಾರೆ.[ಮಂಗಳೂರು ಎಎಸ್ಐ ಐತಪ್ಪನ ಮೇಲೆ ಮಾರಣಾಂತಿಕ ಹಲ್ಲೆ]
2013ರಲ್ಲಿ ನಾರಾವಿ ಸಮೀಪದ ಕುತ್ಲೂರು ಎಂಬಲ್ಲಿ ರಾಮಚಂದ್ರ ಭಟ್ ಅವರ ಓಮ್ನಿ ಕಾರು ಮತ್ತು ಬೈಕ್ಗೆ ಬೆಂಕಿ ಕೊಟ್ಟು ನಾಶ ಮಾಡಿದ ಆರೋಪದಲ್ಲಿಇವರನ್ನು ಬೆಂಗಳೂರಿನ ಜೆ.ಸಿ.ನಗರ ಪೊಲೀಸರು ಬಂಧಿಸಿದ್ದರು. ಇವರು ಮೂಲತಃ ಬೆಂಗಳೂರಿನ ಕೋರಮಂಗಲ ಸ್ಲಂ ನಿವಾಸಿಯಾಗಿದ್ದಾರೆ.[ಮಂಗಳೂರು: ಮಲ್ಯ ಒಡೆತನದ ಎಂಸಿಎಫ್ ನಲ್ಲಿ ಜಲಕ್ಷಾಮ]
ಈ ಪ್ರಕರಣಕ್ಕೆ ಸಂಬಂಧಿಸಿ ವೇಣೂರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಈ ರೀತಿ ನಕ್ಸಲ್ ಘೋಷಣೆಗಳನ್ನು ಕೂಗಿದ್ದಾರೆ.