ಮಂಗಳೂರು, ಉಡುಪಿಯ ಸಂಕ್ಷಿಪ್ತ ಸುದ್ದಿಗಳ ಗುಚ್ಛ
ಮಂಗಳೂರು/ಉಡುಪಿ, ಜೂನ್ 29 : ಕಲ್ಲಿನ ಕ್ವಾರೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಮಂಗಳೂರು ತಾಲೂಕಿನ ವಳಚ್ಚಿಲ್ ಪದವಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತ ಕಾರ್ಮಿಕನನ್ನು ಬಿಹಾರ ಮೂಲದ ಕಿಶೋರ್ (35) ಎಂದು ಗುರುತಿಸಲಾಗಿದೆ.
ವಳಚ್ಚಿಲ್ ಪದವು ಎಕ್ಸ್ಪರ್ಟ್ ಕಾಲೇಜಿನ ಸಮೀಪದಲ್ಲಿನ ಯಡ್ಡು ಎಂಬವರಿಗೆ ಸೇರಿದ ಕಲ್ಲಿನ ಕ್ವಾರೆಯಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿದ ಬಳಿಕ ತನ್ನ 7 ವರ್ಷದ ಮಗನೊಂದಿಗೆ ಕ್ವಾರೆಯಲ್ಲಿ ತುಂಬಿರುವ ಮಳೆ ನೀರಿನಲ್ಲಿ ಕೈ ಕಾಲು ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ್ದಾರೆ. [ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ವರ್ಗಾವಣೆ]
ವಳಚ್ಚಿಲ್
ಪದವು
ಪ್ರದೇಶದಲ್ಲಿ
ಅಧಿಕ
ಸಂಖ್ಯೆಯಲ್ಲಿ
ಅಕ್ರಮ
ಕಲ್ಲಿನ
ಕ್ವಾರೆಗಳು
ಕಾರ್ಯಚರಿಸುತ್ತಿದ್ದು,
ಬೇಸಿಗೆಯಲ್ಲಿ
ನಿರ್ಮಿಸಿದ
ಬೃಹತ್
ಆಳದ
ಕಲ್ಲಿನ
ಕ್ವಾರೆಯಲ್ಲಿ
ಮಳೆ
ನೀರು
ತುಂಬಿದೆ.
ಇದನ್ನು
ಮುಚ್ಚುವ
ಕೆಲಸ
ಇನ್ನೂ
ನಡೆದಿಲ್ಲ
ಎಂದು
ಸ್ಥಳೀಯರು
ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
[ಅತ್ಯಾಚಾರದ
ವಿರುದ್ಧ
ಮಂಗಳೂರು
ವೈದ್ಯರ
ಜನಾಂದೋಲನ]
ಪಿಯುಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆ : ಉಡುಪಿಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆ ನಡೆಯಿತು. ಜುಲೈ 1 ರಿಂದ 13 ರ ತನಕ ಪೂರಕ ಪರೀಕ್ಷೆ ನಡೆಯಲಿದೆ. ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಸರಕಾರಿ ಪ.ಪೂ.ಕಾಲೇಜು ಉಡುಪಿ, ಎಂ.ಜಿ.ಎಂ ಕಾಲೇಜು, ಉಡುಪಿ, ಶ್ರೀ ಭುವನೇಂದ್ರ ಪ.ಪೂ.ಕಾಲೇಜು ಕಾರ್ಕಳ, ಭಂಡರಕರ್ಸ್ ಪ.ಪೂ.ಕಾಲೇಜು, ಕುಂದಾಪುರ ಈ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1748 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಕಡಲ ಕೊರೆತ, ಮನೆಗಳಿಗೆ ಹಾನಿ : ಉಳ್ಳಾಲ, ಉಚ್ಚಿಲದಲ್ಲಿ ಕಡಲ್ಕೊರೆತ ಮುಂದುವರಿದಿದ್ದು ಸೋಮವಾರ ಸುರಿದ ಮಳೆಯಿಂದ ಎರಡು ಮನೆಗಳಿಗೆ ಹಾನಿಯಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಒಟ್ಟು 6 ಮನೆಗಳಿಗೆ ಹಾನಿ ಆದಂತಾಗಿದೆ. [ಶಿವರಾಮ ಕಾರಂತ ಬಾಲವನ ಅಭಿವೃದ್ಧಿಗೆ 1 ಕೋಟಿ ಅನುದಾನ]
ಉಡುಪಿಯಲ್ಲಿ ಕಾಂಗ್ರೆಸ್ ಸಮಾವೇಶ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮೂರು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಉಡುಪಿಯಲ್ಲಿ ಆಗಸ್ಟ್ 3ನೇ ವಾರದಲ್ಲಿ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. 5000 ಜನರು ಸಮಾವೇಶದಲ್ಲಿ ಪಾಳ್ಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಲವು ರಾಷ್ಟ್ರೀಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.