ಶುಕ್ರವಾರದಿಂದ ಮಂಗಳೂರಲ್ಲಿ ಸರ್ಫಿಂಗ್ ಸ್ಪರ್ಧೆ
ಮಂಗಳೂರು, ಮೇ 26 : ಮಂಗಳೂರಿನ ಸಸಿಹಿತ್ಲು ಬೀಚ್ 'ಇಂಡಿಯನ್ ಓಪನ್ ಆಫ್ ಸರ್ಫಿಂಗ್' ಸ್ಪರ್ಧೆಗೆ ಸಿದ್ಧವಾಗಿದೆ. ಮೇ 27 ರಿಂದ 29ರವರೆಗೆ ಬೀಜ್ನಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಮೇ
27ರ
ಶುಕ್ರವಾರ
ಬೆಳಗ್ಗೆ
9
ಗಂಟೆಗೆ
ಪ್ರವಾಸೋದ್ಯಮ
ಸಚಿವ
ಆರ್.ವಿ.ದೇಶಪಾಂಡೆ
ಅವರು
ಸರ್ಫಿಂಗ್
ಸ್ಪರ್ಧೆಯನ್ನು
ಉದ್ಘಾಟಿಸಲಿದ್ದಾರೆ.
ಅಂತಾರಾಷ್ಟ್ರೀಯ
ಸರ್ಫಿಂಗ್
ಅಸೋಸಿಯೇಷನ್
ಹಾಗೂ
ಸರ್ಫಿಂಗ್
ಫೆಡರೇಷನ್
ಆಫ್
ಇಂಡಿಯಾ
ನೇತೃತ್ವದಲ್ಲಿ
ಮಂತ್ರ
ಸರ್ಫ್
ಕ್ಲಬ್,
ಕೆನರಾ
ಸರ್ಫಿಂಗ್
ಅಂಡ್
ವಾಟರ್
ಸ್ಫೋರ್ಟ್
ಪ್ರಮೋಷನ್
ಕೌನ್ಸಿಲ್
ಸಹಭಾಗಿತ್ವದಲ್ಲಿ
ಈ
ಸ್ಪರ್ಧೆಯನ್ನು
ಆಯೋಜಿಸಲಾಗಿದೆ.
[ಸಸಿಹಿತ್ಲು
ಸರ್ಫಿಂಗ್
ಸ್ಪರ್ಧೆ]
ಸ್ಪರ್ಧೆಯಲ್ಲಿ ಭಾಗವಹಿಸಲು ದೇಶದ ವಿವಿಧ ಕಡೆಗಳಿಂದ ಈಗಾಗಲೇ 85 ಸರ್ಫರ್ಗಳು ಆಲ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ 20ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. [ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ]
ಪ್ರತಿದಿನ ಬೆಳಗ್ಗೆ 7.30ರಿಂದ 11.30ರವರೆಗೆ ಹಾಗೂ ಮಧ್ಯಾಹ್ನ 12.45 ರಿಂದ 3 ಗಂಟೆಯವರೆಗೆ ಸಮುದ್ರದ ನೀರಿನ ಅಲೆಗಳ ಏರಿಳಿತವನ್ನು ಗಮನದಲ್ಲಿರಿಸಿಕೊಂಡು ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮೂರು ದಿನಗಳ ಅವಧಿಗೆ ವಸತಿ, ಸಾರಿಗೆ ಹಾಗೂ ಇತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. [ವಾರಾಂತ್ಯಕ್ಕೆ ಕರ್ನಾಟಕ ಹಬ್ಬವೇ ಅತ್ಯುತ್ತಮ ಆಯ್ಕೆ..ಯಾಕಂದ್ರೆ?]
ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಇಂಡೋನೇಷ್ಯಾದ ಸರ್ಫಿಂಗ್ ಕ್ಷೇತ್ರದ ಅಂತಾರಾಷ್ಟ್ರೀಯ ಚಾಂಪಿಯನ್ಗಳು ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ವಿವಿಧ ವಿಭಾಗಗಳಿಗೆ ಒಟ್ಟು 6 ಲಕ್ಷ ರೂ. ವೌಲ್ಯದ ನಗದು ಬಹುಮಾನವನ್ನು ವಿತರಣೆ ಮಾಡಲಾಗುತ್ತದೆ.
ನಾಲ್ಕು ಬಣ್ಣದ ಟೀ ಶರ್ಟ್ : ಸಮುದ್ರದ ನೀರಿನಲ್ಲಿ ವಿವಿಧ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುವ ಸರ್ಫರ್ಗಳನ್ನು ಸುಲಭವಾಗಿ ಗುರುತಿಸಲು ನಾಲ್ಕು ಬಣ್ಣದ ಜೆರ್ಸಿಗಳನ್ನು ಸಿದ್ಧಪಡಿಸಲಾಗಿದೆ. ಮೂರು ದಿನಗಳ ಸ್ಪರ್ಧೆಯ ಸಮಯದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಸರ್ಫಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ.
ಉಚಿತ ಸಾರಿಗೆ ವ್ಯವಸ್ಥೆ : ಸರ್ಫಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಹಾಗೂ ವೀಕ್ಷಕರಿಗೆ ಅನುಕೂಲವಾಗುವಂತೆ ಮುಕ್ಕದ ಶ್ರೀನಿವಾಸ ಕಾಲೇಜಿನ ಪ್ರಮುಖ ಪ್ರವೇಶ ದ್ವಾರದ ಸಮೀಪದಿಂದ ಸಸಿಹಿತ್ಲು ಬೀಚ್ವರೆಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.