ಕಾಸರಗೋಡು ಎಂಡೋ ಪೀಡಿತರಿಗೆ ಮಾ. 30ರೊಳಗೆ 5 ಲಕ್ಷ ರು. ಪರಿಹಾರ
ಸದ್ಯಕ್ಕೆ ಪರಿಹಾರ ಮೊತ್ತದ ಮೊದಲ ಕಂತು ಬಿಡುಗಡೆ; ಉಳಿದ ಕಂತುಗಳನ್ನು ಮೂರು ತಿಂಗಳಲ್ಲಿ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ತಾಕೀತು.
ತಿರುವನಂತಪುರ, ಮಾರ್ಚ್ 19: ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮೇರೆಗೆ ಕಾಸರಗೋಡಿನಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಇದೇ ತಿಂಗಳೊಳಗಾಗಿ (ಮಾರ್ಚ್ 30) ಪ್ರಥಮ ಹಂತದ ಪರಿಹಾರ ಜಾರಿಗೊಳಿಸಲಾಗುವುದು ಎಂದು ಕೇರಳದ ಕಂದಾಯ ಸಚಿವ ಇ. ಚಂದ್ರಶೇಖರನ್ ಅವರು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.
ಪರಿಹಾರದ ಮೊದಲ ಹಂತದಲ್ಲಿ ಐದು ಲಕ್ಷ ರು. ಹಣವನ್ನು ಸಂತ್ರಸ್ಥರಿಗೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ವರ್ಷ ಜನವರಿ ತಿಂಗಳಲ್ಲಿ ಕೇರಳ ಸರ್ಕಾರಕ್ಕೆ ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್, ಕೇರಳದ ಎಂಡೋಸಲ್ಫಾನ್ ಪೀಡಿತರಿಗೆ ನೀಡಬೇಕಿರುವ ಪರಿಹಾರ ಮೊತ್ತವನ್ನು ಇನ್ನು ಮೂರು ತಿಂಗಳಲ್ಲಿ ನೀಡಬೇಕೆಂದು ಹೇಳಿತ್ತು.
Comments
English summary
Endosulfan victims of Kerala will get the compensation amount of phase 1 by March 30,2017, assures Kerala revenue minister E. Chandrasekaran on March 18, 2017, in Kasaragodu.
Story first published: Sunday, March 19, 2017, 1:14 [IST]