ವಿರೋಧದ ನಡುವೆಯೂ ಕೇರಳ ಸಿಎಂ ಮಂಗ್ಳೂರು ಪ್ರವಾಸ ವಿವರ
ಮಂಗಳೂರು, ಫೆಬ್ರವರಿ. 24 : ಪಿಣರಾಯಿ ವಿಜಯನ್ ಹಠಾವೋ ಎಂಬ ವಿರೋಧದ ಕಿಚ್ಚಿನ ನಡುವೆಯೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೆಬ್ರವರಿ 24 ಕ್ಕೆ ಮಂಗಳೂರಿನಲ್ಲಿ ನಡೆಯುವ ಸೌಹಾರ್ದ ರ್ಯಾಲಿಯಲ್ಲಿ ಪಾಲ್ಗೊಳ್ಳವ ದೃಢ ನಿರ್ದಾರ ಕೈಗೊಂಡಿದ್ದಾರೆ.
ಈಗಾಗಲೇ ನಿಗದಿಯಾಗಿರುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳೂರಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.[ಮಂಗಳೂರು: ಪಿಣರಾಯಿ ಕಾರ್ಯಕ್ರಮಕ್ಕೆ 6 ಡ್ರೋನ್ ಗಳಿಂದ ಬಿಗಿ ಭದ್ರತೆ]
ಶನಿವಾರ ಬೆಳಿಗ್ಗೆ 8 ಗಂಟೆಗೆ ಕಾಸರಗೋಡಿನಿಂದ ಮಂಗಳೂರಿಗೆ ಹೊರಡುವ ಅವರು, ಬೆಳಿಗ್ಗೆ 11 ಗಂಟೆಗೆ ನಗರದ ಅತ್ತಾವರ ರಸ್ತೆಯ ಐಎಂಎ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.['ಪಿಣರಾಯಿ ಬಂದರೆ ತೊಂದರೆ ಗ್ಯಾರಂಟಿ' ಜಗದೀಶ್ ಶೇಣವ ಎಚ್ಚರಿಕೆ]
ಮಧ್ಯಾಹ್ನ 3 ಗಂಟೆಗೆ ಪುರಭವನದಲ್ಲಿ ಎ.ಕೆ.ಜಿ ಬೀಡಿ ಕಾರ್ಮಿಕರ ಸಹಕಾರಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ, ಮಧ್ಯಾಹ್ನ 3.30ಕ್ಕೆ ನೆಹರೂ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 5.45 ಕ್ಕೆ ಮಂಗಳೂರಿನಿಂದ ರೈಲಿನ ಮೂಲಕ ತಿರುವನಂತಪುರಕ್ಕೆ ತೆರಳುವರು.