ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮ ಸೇನೆಯಂಥ ಸಂಘಟನೆಗಳನ್ನು ಬ್ಯಾನ್ ಮಾಡಬೇಕು - ಕುಮಾರಸ್ವಾಮಿ

|
Google Oneindia Kannada News

ಮಂಗಳೂರು, ಜೂನ್ 27: "ಮುತಾಲಿಕ್ ಗೆ ದೇಶದ ರಕ್ಷಣೆ ಬೇಕಾಗಿಲ್ಲ, ಅವರಿಗೆ ಹಿಂದೂಗಳ ಬಗ್ಗೆ ಮಾತಾಡಲು ಒಂದು ವಿಷಯ ಬೇಕು ಅಷ್ಟೇ. ಸಮಾಜ ಒಡೆಯುವ ಇಂತಹ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಪೇಜಾವರ ಬಗ್ಗೆ ಲಘುವಾಗಿ ಮಾತನಾಡಬೇಡಿ," ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ಕರಾವಳಿಯಲ್ಲಿ ಕುಟುಂಬ ಸಮೇತ ಪ್ರವಾಸ ಕೈಗೊಂಡಿರುವ ಕುಮಾರಸ್ವಾಮಿಯವರು ಇಂದು ಧರ್ಮಸ್ಥಳದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ತುಲಾಭಾರ ಸೇವೆ ಸಲ್ಲಿಸಿದರು.

ಪೇಜಾವರ ಶ್ರೀಗಳ ಹಿಂಸಿಸಿದರೆ ಮತ್ತೆ ಕೃಷ್ಣನ ದರ್ಶನ ಸಹ ಸಿಗಲಿಕ್ಕಿಲ್ಲಪೇಜಾವರ ಶ್ರೀಗಳ ಹಿಂಸಿಸಿದರೆ ಮತ್ತೆ ಕೃಷ್ಣನ ದರ್ಶನ ಸಹ ಸಿಗಲಿಕ್ಕಿಲ್ಲ

Iftar Party in Krishan Matt: Be careful while talking about Pejawar Swamiji – HD Kumaraswamy

ಈ ಸಂದರ್ಭದಲ್ಲಿ ಅವರು ಪ್ರಮೋದ್ ಮುತಾಲಿಕ್ ವಿರುದ್ಧ ಹರಿಹಾಯ್ದರು. "ಪೇಜಾವರ ಶ್ರೀ ಗಳು ಸಮಾಜಕ್ಕೆ ಐತಿಹಾಸಿಕ ಸಂದೇಶ ಸಾರಿದ್ದಾರೆ. ಸಮಾಜಕ್ಕೆ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ, ಅವರ ಕಾರ್ಯ ನಿಜಕ್ಕೂ ಅಭಿನಂದನೀಯ," ಎಂದರು. ಈ ಹಿಂದೆ ಕೃಷ್ಣ ಮಠದಲ್ಲಿ ಇಫ್ತಾರ್ ಮಾಡಿದ್ದಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಮುಂದುವರಿದು ಮಾತನಾಡಿದ ಅವರು, "ಸಮಾಜದಲ್ಲಿ ದ್ವೇಷದ ಮನೋಭಾವ ಹೋಗಲಾಡಿಸಲು ಇಂಥಹ ನಡೆಗಳು ಸಹಕಾರಿ. ಹಿಂದೂ ಸಂಘಟನೆಗಳು ಸಂಕುಚಿತ ಭಾವನೆ ಹೊಂದಿವೆ ಮತ್ತು ಮುತಾಲಿಕ್ ನಿಲುವು ಒಪ್ಪಲು ಸಾಧ್ಯವಿಲ್ಲ," ಎಂದರು. ಜತೆಗೆ ಶೂದ್ರರು ಕೂಡ ಬಹುತೇಕ ಮಾಂಸಹಾರಿಗಳು ಎಂಬ ಪೇಜಾವರರ ಹೇಳಿಕೆಗೆ ಧ್ವನಿಗೂಡಿಸಿದರು.

Iftar Party in Krishan Matt: Be careful while talking about Pejawar Swamiji – HD Kumaraswamy

ಕುಮಾರಸ್ವಾಮಿ ಜತೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ಗೌಡ ಕೂಡ ಹಾಗೂ ಜೆಡಿಎಸ್ ಪಕ್ಷದ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.

English summary
H D kumaraswamy warned to be careful while talking about Pejawar Swamiji. Iftar Party organized by Krishna Matt was a right initiative by Pejawar shree. Organizations who talking against these must be banned in India said Kumaraswamy to media persons here in Dharmastala on June 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X