ಮಂಗಳೂರು : ಸಾಧ್ವಿ ಬಾಲಿಕಾ ಸರಸ್ವತಿ ವಿರುದ್ಧ ದೂರು
ಮಂಗಳೂರು, ಮಾ.6 : ಮಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಸಾಧ್ವಿ ಬಾಲಿಕಾ ಸರಸ್ವತಿ ಅವರ ವಿರುದ್ಧ ದೂರು ದಾಖಲಾಗಿದೆ. ಸುರೇಶ್ ಭಟ್ ಎಂಬುವವರು ಈ ದೂರು ನೀಡಿದ್ದಾರೆ.
ಮಾರ್ಚ್
1ರಂದು
ವಿಶ್ವ
ಹಿಂದೂ
ಪರಿಷತ್
ಸ್ವರ್ಣ
ಮಹೋತ್ಸವದ
ಅಂಗವಾಗಿ
ಮಂಗಳೂರಿನ
ನೆಹರೂ
ಮೈದಾನದಲ್ಲಿ
ಹಿಂದೂ
ಸಮಾಜೋತ್ಸವ
ಆಯೋಜಿಸಲಾಗಿತ್ತು.
ಇದರಲ್ಲಿ
ಪಾಲ್ಗೊಂಡಿದ್ದ
ಸಾಧ್ವಿ
ಬಾಲಿಕಾ
ಸರಸ್ವತಿ
ಅವರು
ಪ್ರಚೋದನಾಕಾರಿ
ಭಾಷಣ
ಮಾಡಿದ್ದಾರೆ
ಎಂದು
ಆರೋಪಿಸಲಾಗಿದೆ.
[ಮಂಗಳೂರು
ಸಮಾವೇಶದ
ಚಿತ್ರಗಳು]
ಕೋಮು ಸೌಹಾರ್ದ ವೇದಿಕೆಯ ಮುಖಂಡ ಸುರೇಶ್ ಭಟ್ ಬಾಕ್ರಬೈಲು ಎಂಬುವವರು ಪಾಂಡೇಶ್ವರ ಠಾಣೆಗೆ ಈ ಕುರಿತು ಗುರುವಾರ ದೂರು ನೀಡಿದ್ದಾರೆ. ಕೋಮುಭಾವನೆ ಪ್ರಚೋದಿಸುವ ಭಾಷಣ ಮಾಡಿದ ಸಾಧ್ವಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. [ಸಮಾಜೋತ್ಸವಕ್ಕೆ ಹರಿದು ಬಂದ ಜನಸಾಗರ]
ಏನು ಹೇಳಿದ್ದರು : ಸಮಾಜೋತ್ಸವದಲ್ಲಿ ಮಾಡಿದ ಭಾಷಣದಲ್ಲಿ ಸಾಧ್ವಿ ಅವರು, 'ಹಿಂದೂ ಯುವತಿಯರನ್ನು ಕಣ್ಣೆತ್ತಿ ನೋಡುವ ಮುಸ್ಲಿಂ ಯುವಕರ ರುಂಡ ಕತ್ತರಿಸಿ, ಪಾಕಿಸ್ತಾನಕ್ಕೆ ಜೈಕಾರ ಹಾಕುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ' ಮುಂತಾದ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದರು.
ದೂರನ್ನು ಸ್ವೀಕರಿಸಿದ ಪಾಂಡೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ನಿಷೇದ ಉಲ್ಲಂಘನೆ ಮಾಡಿ ಭಾಷಣ ಮಾಡಿದ ಪ್ರವೀಣ್ ತೊಗಾಡಿಯಾ ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.