ಮದುವೆ ದಿನವೇ ವರ ಸಾವು, ಸಂಭ್ರಮದ ಮನೆಯಲ್ಲಿ ಸೂತಕ
ಮಂಗಳೂರು, ಜುಲೈ 13 : ಮದುವೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದಾಗ ವರ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಮನೆಯಲ್ಲಿ ಆಯತಪ್ಪಿ ಬಿದ್ದ ವರನನ್ನು ಆಸ್ಪತ್ರೆಗೆ ಸೇರಿಸುವ ಮೊದಲೇ ಸಾನ್ನಪ್ಪಿದ್ದಾನೆ.
ಸುಳ್ಯ ತಾಲೂಕಿನ ಪಂಜ ಗ್ರಾಮದ ಕಂಡೂರಿನಲ್ಲಿ ಈ ಘಟನೆ ನಡೆದಿದೆ. ಸಚಿನ್ (28) ಮೃತಪಟ್ಟ ವರ, ಬುಧವಾರ ಮಧ್ಯಾಹ್ನ 12 ಗಂಟೆಗೆ ಪೈಂದೋಡಿ ದೇವಸ್ಥಾನದಲ್ಲಿ ಸಚಿನ್ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕೂ ಮೊದಲು ಈ ದುರ್ಘಟನೆ ನಡೆದಿದೆ. [ಪಿಎಂ ಮೋದಿ ಪರ, ವಿರೋಧ ಚರ್ಚೆಯಲ್ಲಿ ನಿಂತು ಹೋದ ಮದುವೆ!]
ಹಸೆಮಣೆ ಏರಲು ಸಿದ್ಧವಾಗಿದ್ದ ಸಚಿನ್ ತನ್ನ ಮನೆಯಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾರೆ. ಬೆಳಗ್ಗೆ ಮನೆಯಲ್ಲಿ ಶೇವಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸಚಿನ್ ಆಯತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. [ವಿಚ್ಛೇದನ ಪ್ರಕರಣ: ಕರ್ನಾಟಕಕ್ಕೆ 4ನೇ ಸ್ಥಾನ]
ಪಂಜದ ಕಂಡೂರ ಪರಮೇಶ್ವರ ಗೌಡರ ಪುತ್ರ ಸಚಿನ್ ಹಾಗೂ ಎಡಮಂಗಲದ ಹೊನ್ನಪ್ಪಾಡಿ ಬಾಲಕೃಷ್ಣ ಗೌಡರ ಪುತ್ರಿ ಗಾಯತ್ರಿ ಅವರ ವಿವಾಹ ಇಂದು ನಡೆಯಬೇಕಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಮೌನ ಮನೆ ಮಾಡಿದೆ. [4ನೇ ಮದುವೆಗೆ ಯತ್ನಿಸಿದವನಿಗೆ ಹಿಗ್ಗಾಮುಗ್ಗಾ ಗೂಸಾ!]