ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಕೆಲಸಕ್ಕೆಂದು ಬಂದಿದ್ದ ಉತ್ತರ ಕನ್ನಡ ಯುವತಿ ನಾಪತ್ತೆ

ಇನ್ನು ನಾಲ್ವರು ಯುವತಿಯರು ನಾಪತ್ತೆಯಾಗಿದ್ದು, ಹುಡುಗಿಯರ ಮಾರಾಟ ನಡೆದಿರಬಹುದೇ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಮೂಲದ 5 ಯುವತಿಯರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.

|
Google Oneindia Kannada News

ಮಂಗಳೂರು: ಉಳ್ಳಾಲದ ಮೀನು ಉತ್ಪನ್ನ ಕಂಪೆನಿಯೊಂದರಲ್ಲಿ ಎಂಟು ತಿಂಗಳ ಹಿಂದೆ ಕೆಲಸಕ್ಕೆಂದು ಸೇರಿದ್ದ ಉತ್ತರ ಕನ್ನಡ ಜಿಲ್ಲೆಯ ಯುವತಿ ನಾಪತ್ತೆಯಾಗಿದ್ದಾಳೆ. ಆಕೆಯನ್ನು ಕರೆತಂದ ಯುವತಿಯು ಸಂಪರ್ಕಕ್ಕೆ ಲಭ್ಯವಾಗುತ್ತಿಲ್ಲ.

ಉತ್ತರ ಕನ್ನಡ ಜಿಲ್ಲೆಯ ರಾಯಪಟ್ಟಣ, ಹಳಿಯಾಳ ತಾಲೂಕಿನ ದೊಂಡಿಬಾಯಿ ಚಿಮನು ಬಾಜಾರಿ (೨೦) ಎಂಬ ಯುವತಿ ಉಳ್ಳಾಲಕ್ಕೆ ಕೆಲಸಕ್ಕೆಂದು ಬಂದಿದ್ದ ಯುವತಿ. ದೊಂ

Girl from North Karnataka Goes Missing at Ullal in Mangaluru

ಡಿಬಾಯಿಯನ್ನು ಮಂಗಳೂರಿನಲ್ಲಿ ಕೆಲಸಕ್ಕಿದ್ದ ಮೂಲತಃ ಯಲ್ಲಾಪುರದ ಸುನಿತಾ ದುಳು ಬಿಚ್ಚಕಲೆ (೨೪) ಎಂಬವಳು ಕಳೆದ ಎಂಟು ತಿಂಗಳ ಹಿಂದೆ ತಾನು ಮಂಗಳೂರಿನ ಉಳ್ಳಾಲದ ಮೀನಿನ ಫ್ಯಾಕ್ಚಟರಿಯ ಏಜೇಂಟ್ ಎಂದು ಪರಿಚಯಿಸಿಕೊಂಡು ಫ್ಯಾಕ್ಟಾರಿಗೆ ಕೆಲಸಕ್ಕೆ ಸೇರಿಸಿದ್ದಳು ಎನ್ನಲಾಗಿದೆ.

ಇದೇ ಊರಿನ ಇನ್ನು ನಾಲ್ವರು ಯುವತಿಯರು ನಾಪತ್ತೆಯಾಗಿದ್ದು, ಹುಡುಗಿಯರ ಮಾರಾಟ ನಡೆದಿರಬಹುದೇ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಮೂಲದ ಐವರು ಯುವತಿಯರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಹೆತ್ತವರು, ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂದರ್ಭ ಠಾಣೆಗೆ ಬಂದಿದ್ದ ಹೆಣ್ಮಕ್ಕಳ ಪೋಷಕರು ಯುವತಿಯರ ನಾಪತ್ತೆ ಹಿಂದೆ ಉಳ್ಳಾಲ ಮೂಲದ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಉಳ್ಳಾಲ ಸುತ್ತಮುತ್ತ ಹೆಣ್ಮಕ್ಕಳ ಮಾರಾಟ ಜಾಲ ಕಾರ್ಯಾಚರಿಸುತ್ತಿದೆಯೇ ಎಂಬ ಶಂಕೆ ಎದ್ದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
A girl from North Karnataka who had come to work in a fish mill in Ullal, Mangaluru had gone missing and her parents have urged the police department to find her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X