ಪಂಚಭೂತಗಳಲ್ಲಿ ಲೀನವಾದ ಆರೆಸ್ಸೆಸ್ ಕಾರ್ಯಕರ್ತ ಶರತ್
ಶನಿವಾರ ಬೆಳಗ್ಗೆ ಅಸುನೀಗಿದ ಆರೆಸ್ಸೆಸ್ ಕಾರ್ಯಕರ್ತ ಶರತ್ ಅಂತ್ಯಕ್ರಿಯೆ. ಕೆಲ ದಿನಗಳ ಹಿಂದೆ ಅಪರಿಚಿತರಿಂದ ಹಲ್ಲೆಗೊಳಗಾಗಿದ್ದ ಶರತ್. ಶುಕ್ರವಾರ (ಜುಲೈ 7) ಸಂಜೆ ಅಸುನೀಗಿದ ಶರತ್.
ಮಂಗಳೂರು, ಜುಲೈ 8: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಅಸುನೀಗಿದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಜರುಗಿತು.
ಮಂಗಳೂರು: ಹಲ್ಲೆಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಸಾವು
ಬಂಟ್ವಾಳದ ಸಜಿಪ ಗ್ರಾಮದ ಕೆಂದೂರಿನಲ್ಲಿರುವ ಶರತ್ ಕುಟುಂಬದ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಹಿಂದೂ ಸಂಪ್ರದಾಯದಂತೆ ನಡೆದ ಅಂತ್ಯ ಸಂಸ್ಕಾರದ ಮೂಲಕ ಶರತ್ ಅವರು ಪಂಚಭೂತಗಳಲ್ಲಿ ಲೀನವಾದರು.
ಆರೆಸ್ಸೆಸ್ ಕಾರ್ಯಕರ್ತನ ಸಾವು: ಬಿ ಸಿ ರೋಡಿನಲ್ಲಿ ಸ್ಮಶಾನ ಮೌನ
ಅಂತಿಮ ಕ್ರಿಯೆಯಲ್ಲಿ ಆರೆಸ್ಸೆಸ್ ಮುಖಂಡರು ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು. ನಳಿನ್, ಪಾಲೇಮಾರ್, ಕಲ್ಲಡ್ಕ ಭಟ್ ಸಹಿತ ಹಲವರು ಭಾಗಿಯಾಗಿದ್ದರು.
English summary
Funeral rituals of Sharat carried out at Saturday afternoon who expired on 8th July 2017, in the farm house of his family near Bantwala.