ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈಗೆ ಶಿಕ್ಷೆಯಾಗಲೆಂದು ದೇವರಲ್ಲಿ ಪ್ರಾರ್ಥನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್. 21 : ಮಾಹಿತಿಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯಾಗಿ ಇಂದಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಾಳಿಗಾ ಸಹೋದರಿಯರು ವೆಂಕಟರಮಣನಿಗೆ ಕೈ ಮುಗಿದು, ಕೊಲೆ ಆರೋಪಿ ನರೇಶ್ ಶೆಣೈಗೆ ಶಿಕ್ಷೆಯಾಗುವಂತೆ ಪ್ರಾರ್ಥನೆ ಮಾಡಿದರು.

ಬಳಿಕ ವೆಂಕಟರಮಣ ದೇವಾಲಯದಿಂದ ವಿನಾಯಕ ಬಾಳಿಗಾ ಮನೆವರೆಗೆ ವಿಚಾರವಾದಿ ನರೇಂದ್ರ ನಾಯಕ್ ನೇತೃತ್ವದ 'ದೇಶ ಪ್ರೇಮಿ ಸಂಘಟನೆ' ಮತ್ತು ಇತರ ಸಂಘಟನೆಗಳ ಸದಸ್ಯರು ಮೌನ ಮೆರವಣಿಗೆ ನಡೆಸಿದರು.[ಬಾಳಿಗಾ ಕೊಲೆ ಪ್ರಕರಣ: ಸರ್ಕಾರಿ ವಿಶೇಷ ಅಭಿಯೋಜಕರಾಗಿ ರವೀಂದ್ರನಾಥ್]

Family members stage silent march on the first death anniversary of Vinayak Baliga

2016 ಮಾರ್ಚ್ 21 ರಂದು ಕೊಲೆಯಾಗುವ ಮುನ್ನ ಸಂಜೆ ಬಾಳಿಗಾ ಅವರು ನಡೆದಾಡಿದ ಬೀದಿಗಳಲ್ಲಿ ವಿವಿಧ ಸಂಘಟನೆಗಳು ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಬಾಳಿಗಾ ಅವರ ಹೆಜ್ಜೆಗೆ ನಮ್ಮ ಹೆಜ್ಜೆಯನ್ನು ಸೇರಿಸುವ ಮೂಲಕ ಬಾಳಿಗಾ ಕುಟುಂಬದ ಜೊತೆ ನಿಲ್ಲಬೇಕಿದೆ.

ಕೊಲೆಗಡುಕರ ವಿರುದ್ದ ಮಂಗಳೂರಿನ ಜನಸಾಮಾನ್ಯರ ಪ್ರತಿರೋಧದ ದ್ವನಿಯನ್ನು ಗಟ್ಟಿಯಾಗಿ ಮೊಳಗಿಸಬೇಕಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಈ ಸಂದರ್ಭ ಕರೆಕೊಟ್ಟಿದ್ದಾರೆ. ಬಾಳಿಗಾ ಕೊಲೆ ಪ್ರಕರಣದಲ್ಲಿ ನಮೋ ಬ್ರಿಗೇಡ್ ಸ್ಥಾಪಕ ನಮೋ ನರೇಶ್ ಶೆಣೈ ಪ್ರಧಾನ ಆರೋಪಿಯಾಗಿದ್ದಾನೆ.[ವಿನಾಯಕ ಬಾಳಿಗ ಕೊಲೆ ಪ್ರಕರಣ: ಆರೋಪಿಗಳಿಗೆ ಜಾಮೀನು]

Family members stage silent march on the first death anniversary of Vinayak Baliga

ನರೇಶ್ ಶೆಣೈ ಜಾಮೀನು ಪಡೆದು ಹೊರಬರುವಾಗ ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಜೈಲಿನ ಬಾಗಿಲಿಗೆ ತೆರಳಿ ಆಲಿಂಗನದ ಮೂಲಕ ಸ್ವಾಗತಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.

English summary
Family members and social organizations led by Prof Narendra Nayak staged a silent march from Venkatramana Temple to Vinayaka Baliga residence at March 21 Tuesday on the first death anniversary of Baliga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X