ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನೂರು ಶರತ್‌ಗಳು ಹುಟ್ಟಿ ಬಂದು ದುಷ್ಕರ್ಮಿಗಳಿಗೆ ಪಾಠ ಕಲಿಸಲಿದ್ದಾರೆ'

|
Google Oneindia Kannada News

ಮಂಗಳೂರು, ಜುಲೈ 11 : ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಸಜಿಪ ಗ್ರಾಮದಲ್ಲಿರುವ ಮನೆಗೆ ಇಂದು (ಮಂಗಳವಾರ) ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ ನೀಡಿದರು.

ಆರೆಸ್ಸೆಸ್ ಶರತ್ ಮಡಿವಾಳ ಶವ ಯಾತ್ರೆಯ ಗ್ರೌಂಡ್ ರಿಪೋರ್ಟ್ಆರೆಸ್ಸೆಸ್ ಶರತ್ ಮಡಿವಾಳ ಶವ ಯಾತ್ರೆಯ ಗ್ರೌಂಡ್ ರಿಪೋರ್ಟ್

ಬಳಿಕ ಮಾಧ್ಯಮ ಪ್ರತಿನಿದಿಗಳ ಜತೆಗೆ ಮಾತನಾಡಿದ ಅವರು, "ಮನೆಗೆ ಆಧಾರವಾಗಿದ್ದ ಪುತ್ರನನ್ನು ಕಳೆದುಕೊಂಡು ದುಃಖದಲ್ಲಿರುವ ತಂದೆಗೆ ಸಾಂತ್ವನ ಹೇಳುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ಒಬ್ಬ ಶರತ್ ಕೊಲೆ ಆಗಿದ್ದರೂ ನೂರು ಶರತ್ ಗಳು ಹುಟ್ಟಿ ಬಂದು ದುಷ್ಕರ್ಮಿಗಳಿಗೆ ಪಾಠ ಕಲಿಸಲಿದ್ದಾರೆ" ಎಂದರು.

D.V. Sadananda Gowda visits sharat madivala house in mangaluru

ಈ ಪ್ರಕರಣವನ್ನು ಇಷ್ಟಕ್ಕೇ ಬಿಡಲು ಸಾಧ್ಯವಿಲ್ಲ. ಯಾರು ಯಾರಿಗೆ ತುಪ್ಪ ಸುರಿಯುತ್ತಿದ್ದಾರೆ ಎಂಬುದು ಕೂಡ ನನಗೆ ಚನ್ನಾಗಿ ಗೋತಿದೆ.

ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಐಜಿಪಿ, ಎಸ್ಪಿಯವರೊಂದಿಗೆ ಸಭೆ ನಡೆಸಿ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾಹಿತು ಪಡೆಯಲಿದ್ದೇನೆ ಎಂದು ಹೇಳಿದರು.

D.V. Sadananda Gowda visits sharat madivala house in mangaluru

ಇದೇ ವೇಳೆ ಮಾತನಾಡಿದ ಶರತ್ ತಂದೆ ತಿನಿಯಪ್ಪ, 'ಪೊಲೀಸರಿಗೆ ಆರೋಪಿಗಳ ಬಂಧನ ಮಾಡದಂತೆ ರಾಜಕೀಯ ಒತ್ತಡ ಇರಬಹುದು.

ತನಿಖೆಯ ವಿಚಾರಣೆ ಏನಾಗುತ್ತಿದೆ ಎಂಬುವುದೇ ನಮಗೆ ಗೊತ್ತಿಲ್ಲ, ಮತ್ತು ನನ್ನನ್ನು ಇಲ್ಲಿ ತನಕ ಯಾರು ಕೂಡ ಸಂಪರ್ಕಿಸಿಲ್ಲ' ಎಂದರು.

English summary
D.V. Sadananda Gowda Minister for Statistics and Programme Implementation visits sharat madivala house in mangaluru on Tuesday, and said there will be a rise of 100 more sharat madivalas and teach the murders a lesson.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X