ಭಾರತ್ ಬಂದ್ : ದಕ್ಷಿಣ ಕನ್ನಡದಲ್ಲಿ ಶಾಲಾ-ಕಾಲೇಜಿಗೆ ರಜೆ ಇಲ್ಲ
ಮಂಗಳೂರು, ಸೆಪ್ಟೆಂಬರ್ 01 : ವಿವಿಧ ಕಾರ್ಮಿಕ ಸಂಘಟನೆಗಳು ಸೆ.2ರ ಶುಕ್ರವಾರ ಭಾರತ್ ಬಂದ್ಗೆ ಕರೆ ನೀಡಿವೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಕಾರ್ಮಿಕ
ಸಂಘಟನೆಗಳು
ಕರೆ
ನೀಡಿರುವ
ಸೆಪ್ಟೆಂಬರ್
2ರ
ಭಾರತ್
ಬಂದ್ಗೆ
ದಕ್ಷಿಣ
ಕನ್ನಡ
ಜಿಲ್ಲೆಯಲ್ಲಿಯೂ
ಬೆಂಬಲ
ನೀಡಲಾಗಿದೆ.
ಸರ್ಕಾರಿ
ಮತ್ತು
ಖಾಸಗಿ
ಬಸ್
ಸಂಚಾರ
ಸ್ಥಗಿತಗೊಳ್ಳಲಿದೆ.
ಆಟೋ
ಚಾಲಕರು
ಶುಕ್ರವಾರದ
ಬಂದ್ಗೆ
ಬೆಂಬಲ
ನೀಡಿದ್ದಾರೆ.[ಸೆ.2ರಂದು
ದಕ್ಷಿಣ
ಕನ್ನಡದಲ್ಲಿ
ಸ್ವಯಂ
ಪ್ರೇರಿತ
ಬಂದ್]
ಗುರುವಾರ ಸಂಜೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಅವರು, 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು ಎಂದಿನಂತೆ ಇರಲಿದ್ದು, ಯಾವುದೇ ರಜೆ ಇರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.[ಮುಷ್ಕರ:ಯಾವ ಸೇವೆ ಲಭ್ಯ? ಯಾವುದು ಅಲಭ್ಯ?]
'ಬಂದ್ ಬಗ್ಗೆ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಂದ್ ಕರೆ ನೀಡಿರುವ ಸಂಘಟಕರಿಗೂ ಶಾಂತಿಯುತವಾಗಿ ಇರುವಂತೆ ಸೂಚಿಸಲಾಗಿದೆ' ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮುಷ್ಕರ ನಡೆಯಲಿದ್ದು ಟ್ಯಾಕ್ಸಿ, ಆಟೋ ಬಸ್ ಯಾವುದೇ ವಾಹನಗಳು ರಸ್ತೆಗೆ ಇಳಿಯುವುದಿಲ್ಲ. ಆದ್ದರಿಂದ, ದೂರದ ಊರಿಗೆ ಪ್ರಯಾಣ ಬೆಳೆಸುವವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.