ಮಂಗಳೂರು : ಗುರುವಾರವೂ ರಸ್ತೆಗಿಳಿಯದ ಆಟೋಗಳು
ಮಂಗಳೂರು, ಜ.29 : ಆಟೋ ರಿಕ್ಷಾ ದರಗಳನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಆಟೋ ಚಾಲಕರ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗುರುವಾರವೂ ಮುಂದುವರೆದಿದೆ. ಆಟೋ ಚಾಲಕರ ಜೊತೆ ಜಿಲ್ಲಾಡಳಿತ ನಡೆಸಿದ ಸಭೆಯೂ ವಿಫಲಗೊಂಡಿದೆ.
ಪ್ರಾದೇಶಿಕ
ಸಾರಿಗೆ
ಪ್ರಾಧಿಕಾರ
ಜ.
12ರಂದು
ಆಟೋ
ರಿಕ್ಷಾ
ದರಗಳನ್ನು
ಪರಿಷ್ಕರಣೆ
ಮಾಡಿ
ಆದೇಶ
ಹೊರಡಿಸಿತ್ತು.
ಅದರಂತೆ
ಆಟೋದಲ್ಲಿ
ಕನಿಷ್ಠ
ದರದಲ್ಲಿ
5
ರೂ.
ಕಡಿಮೆ
ಮಾಡಲಾಗಿದೆ.
ರೂ.25
ಇದ್ದ
ದರವನ್ನು
20
ರೂ.ಗಳಿಗೆ
ಇಳಿಕೆ
ಮಾಡಲಾಗಿದೆ.
ಇದಕ್ಕೆ
ಆಟೋ
ಚಾಲಕರು
ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
ಆಟೋ
ಚಾಲಕರು
ನೂತನ
ದರವನ್ನು
ಪಡೆಯದೇ
ಹಳೆಯ
ದರವನ್ನೇ
ಪಡೆಯುತ್ತಿದ್ದರು.
ಇದು
ಪ್ರಾಧಿಕಾರದ
ಗಮನಕ್ಕೆ
ಬಂದ
ನಂತರ
ಪ್ರಾಧಿಕಾರ
ನಿಗದಿಪಡಿಸಿದ
ಪ್ರಯಾಣದರವನ್ನು
ಮಾತ್ರ
ಪಡೆಯಬೇಕು.
ಅಧಿಕ
ಪ್ರಯಾಣ
ದರ
ವಸೂಲಿ
ಮಾಡುವ
ಅಟೋ
ರಿಕ್ಷಾ
ಚಾಲಕರ/ಮಾಲೀಕರ
ವಿರುದ್ಧ
ಕಾನೂನು
ಕ್ರಮ
ಕೈಗೊಳ್ಳಲಾಗುತ್ತದೆ
ಎಂದು
ಪ್ರಾಧಿಕಾರ
ಎಚ್ಚರಿಕೆ
ನೀಡಿತು.
[ಮಂಗಳೂರು
:
ಖಾಸಗಿ
ಬಸ್,
ಆಟೋ
ದರದ
ಬಗ್ಗೆ
ಗೊಂದಲ]
ಇದಕ್ಕೆ
ಆಕ್ಷೇಪ
ವ್ಯಕ್ತಪಡಿಸಿದ
ಆಟೋ
ಚಾಲಕರು
ಪ್ರಯಾಣದರವನ್ನು
ಪರಿಷ್ಕರಣೆ
ಮಾಡುವಂತೆ
ಒತ್ತಾಯಿಸಿ
ಬುಧವಾರ
ಬಂದ್ಗೆ
ಕರೆ
ನೀಡಿದ್ದರು.
ಗುರುವಾರವೂ
ಆಟೋ
ಚಾಲಕರು
ತಮ್ಮ
ಮುಷ್ಕರವನ್ನು
ಮುಂದುವರೆಸಿದ್ದಾರೆ.
[ಮೈಸೂರು
:
ಕೆಆರ್
ಆಸ್ಪತ್ರೆ
ಬಳಿ
ಪ್ರೀ
ಪೇಯ್ಡ್
ಆಟೋ]
ಜಿಲ್ಲಾಧಿಕಾರಿ
ಹೇಳುವುದೇನು
:
ಆಟೋ
ಚಾಲಕರ
ಮುಷ್ಕರದ
ಕುರಿತು
ಜಿಲ್ಲಾಧಿಕಾರಿ
ಎ.ಬಿ.
ಇಬ್ರಾಹಿಂ
ಅವರು
ಪ್ರತಿಕ್ರಿಯೆ
ನೀಡಿದ್ದು,
ಆಟೋ
ಗ್ಯಾಸ್
ದರ
ಶೇ.
50ರಷ್ಟು
ಕಡಿಮೆ
ಆದ
ಕಾರಣದಿಂದ
ರಿಕ್ಷಾ
ದರದಲ್ಲಿ
ಶೇ.
20ರಷ್ಟು
ಮಾತ್ರ
ಕಡಿಮೆ
ಮಾಡಲಾಗಿದೆ.
ಚಾಲಕರ
ಜೊತೆ
ಮಾತುಕತೆಗೆ
ಜಿಲ್ಲಾಡಳಿತ
ಸಿದ್ಧವಾಗಿದೆ
ಎಂದು
ಹೇಳಿದ್ದಾರೆ.
[ಚಿತ್ರಗಳು
:
ಐಸಾಕ್
ರಿಚರ್ಡ್,
ಮಂಗಳೂರು]