ಭಾನುವಾರ ಮಂಗಳೂರಿಗೆ ಅಮಿತ್ ಶಾ, ಕಾರ್ಯಕ್ರಮಗಳು
ಮಂಗಳೂರು, ಆಗಸ್ಟ್ 20 : ಉಳ್ಳಾಲದ ವೀರರಾಣಿ ಅಬ್ಬಕ್ಕನ ನಾಡಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆ.21ರ ಭಾನುವಾರ ಭೇಟಿ ನೀಡಲಿದ್ದಾರೆ. '70ನೇ ಸ್ವಾತಂತ್ರ್ಯೊತ್ಸವ ಬಲಿದಾನ ಸ್ಮರಣೆ' ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದು, ಸುಮಾರು 5 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಭಾನುವಾರ
ಬೆಳಗ್ಗೆ
11.30ಕ್ಕೆ
ಮಂಗಳೂರು
ವಿಶ್ವವಿದ್ಯಾಲಯ
ಆವರಣದಲ್ಲಿ
'ತಿರಂಗಾ
ಯಾತ್ರೆ
ಬೃಹತ್
ಸಾರ್ವಜನಿಕ
ಸಭೆ'
ನಡೆಯಲಿದೆ.
ವಿವಿಯ
ಮಂಗಳಾ
ಸಭಾಂಗಣವನ್ನು
ಇದಕ್ಕಾಗಿ
ಸಜ್ಜುಗೊಳಿಸಲಾಗಿದೆ.
ಅಪಾರ
ಸಂಖ್ಯೆಯಲ್ಲಿ
ಕಾರ್ಯಕರ್ತರು
ಸೇರುವ
ಕಾರಣ
ಸಭಾಂಗಣದ
ಮುಂಭಾಗ
ಬೃಹತ್
ಚಪ್ಪರ
ನಿರ್ಮಿಸಲಾಗಿದೆ.[ಬಿಜೆಪಿ
ರಾಷ್ಟ್ರೀಯ
ಅಧ್ಯಕ್ಷ
ಅಮಿತ್
ಶಾ
ಉಳ್ಳಾಲಕ್ಕೆ]
ಮಂಗಳಾ ಸಭಾಂಗಣದ ಒಳಗೆ ಸುಮಾರು ಒಂದೂವರೆ ಸಾವಿರ ಮಂದಿ ಕುಳಿತುಕೊಳ್ಳಬಹುದು. ಉಳಿದ ಜನರಿಗೆ ಅನುಕೂಲವಾಗುವಂತೆ ಸಭಾಂಗಣ ಮುಂಭಾಗದಲ್ಲಿ ಚಪ್ಪರ ಹಾಕಲಾಗುತ್ತಿದ್ದು, ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲವಾಗುವಂತೆ 3 ಎಲ್ಇಡಿ ಪರದೆಯನ್ನು ಅಳವಡಿಸಲಾಗುತ್ತಿದೆ.[ಚಿತ್ರಗಳು : ಕರ್ನಾಟಕದಲ್ಲಿ ಬಿಜೆಪಿಯ ತಿರಂಗ ಯಾತ್ರೆ]
ಅಮಿತ್
ಶಾ
ಅವರ
ಜೊತೆ
ಕೇಂದ್ರ
ಸಚಿವ
ಡಿ.ವಿ.ಸದಾನಂದ
ಗೌಡ,
ಬಿಜೆಪಿ
ರಾಜ್ಯಾಧ್ಯಕ್ಷ
ಬಿ.ಎಸ್.ಯಡಿಯೂರಪ್ಪ
ಸಂಸದ
ನಳೀನ್
ಕುಮಾರ್
ಕಟೀಲ್
ಸೇರಿದಂತೆ
ಹಲವು
ನಾಯಕರು
ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲಿದ್ದಾರೆ.
ಅಮಿತ್ ಶಾ ಕಾರ್ಯಕ್ರಮಗಳು
*
ಬೆಳಗ್ಗೆ
10
ಗಂಟೆಗೆ
ಬಿಜೆಪಿ
ಕಚೇರಿ
ಮುಂಭಾಗ
'ಗಿಡ
ನೆಡಿ
ಪರಿಸರ
ಉಳಿಸಿ'
ಕಾರ್ಯಕ್ರಮ
*
10.20ಕ್ಕೆ
ಪಂಪ್ವೆಲ್
ವೃತ್ತದಲ್ಲಿ
ತಿರಂಗಾ
ಯಾತ್ರೆ
ಬೃಹತ್
ಜಾಥಾ
ಉದ್ಘಾಟನೆ
*
ಬೆಳಗ್ಗೆ
11ಕ್ಕೆ
ಉಳ್ಳಾಲದಲ್ಲಿ
ರಾಣಿ
ಅಬ್ಬಕ್ಕನ
ಪ್ರತಿಮೆಗೆ
ಮಾಲಾರ್ಪಣೆ
*
11.30ಕ್ಕೆ
ತಿರಂಗಾ
ಯಾತ್ರೆ
ಬೃಹತ್
ಸಾರ್ವಜನಿಕ
ಸಭೆ