ಮಂಗಳೂರು: ಮದುವೆಗೆ ಹೋಗುವರು ಮಸಣ ಸೇರಿದರು!
ಮಂಗಳೂರು, ಮಾರ್ಚ್ 24 : ಟೆಂಪೋ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಉರುಳಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು 18 ಮಂದಿ ಗಾಯಗೊಂಡ ಘಟನೆ ಶುಕ್ರವಾರ ಶಿರಾಡಿ ಘಾಟ್ ನ ಕೆಂಪುಹೊಳೆ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿಗಳಾದ ಗಂಗಮ್ಮ(50), ಗೋವಿಂದರಾಜ್(45) ಹಾಗೂ ಸರಿತಾ(30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಾಹನದಲ್ಲಿದ್ದ ಸೇನಮ್ಮ, ಭಾಗ್ಯಮ್ಮ, ನಂಜಪ್ಪ, ಪ್ರಮೋದ್ ಚಿಕ್ಕಣ್ಣ. ರಾಜಮ್ಮ ಹಾಗೂ ಇತರರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲ ಕುಣಿಗಲ್ ಮೂಲದ ಒಂದೇ ಕುಟುಂಬದ ಸದಸ್ಯರು ಶುಕ್ರವಾರ ಮುಂಜಾನೆ ಮದುವೆಗೆಂದು ಧರ್ಮಸ್ಥಳಕ್ಕೆ ಟೆಂಪೋ ಟ್ರಾವೆಲರ್ ನಲ್ಲಿ ಹೋಗುತ್ತಿರುವ ವೇಳೆ ಕೆಂಪುಹೊಳೆ-ಮಾರನಹಳ್ಳಿ ಮಧ್ಯಭಾಗದ ತಿರುವಿನಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಮರಿಗೆ ಉರುಳಿ ಬಿದ್ದಿದೆ.
ಸಾರ್ವಜನಿಕರು ಹಾಗೂ ಪೊಲೀಸರು ಹರಸಾಹಸಪಟ್ಟು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Comments
English summary
Three people were killed and over 18 injured when a tempo traveller overturned in the Kempuhole Shiradi Ghat, on March 24.
Story first published: Friday, March 24, 2017, 20:01 [IST]