ಕಾವೇರಿ ವಿವಾದ : ಸೆಪ್ಟೆಂಬರ್ 15ರಂದು ರೈಲ್ವೆ ಬಂದ್
ಬೆಂಗಳೂರು, ಸೆಪ್ಟೆಂಬರ್ 10 : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸೆ.15ರಂದು ರಾಜ್ಯಾದ್ಯಂತ ರೈಲ್ವೆ ಬಂದ್ಗೆ ಕರೆ ನೀಡಲಾಗಿದೆ. ಶುಕ್ರವಾರ ಕರ್ನಾಟಕ ಬಂದ್ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು.
ಮಂಡ್ಯದಲ್ಲಿ
ಶನಿವಾರ
ಮಾತನಾಡಿದ
ಕನ್ನಡ
ಚಳವಳಿ
ವಾಟಾಳ್
ಪಕ್ಷದ
ಅಧ್ಯಕ್ಷ
ವಾಟಾಳ್
ನಾಗರಾಜ್
ಅವರು,
'ಕೇಂದ್ರ
ಸರ್ಕಾರದ
ಗಮನ
ಸೆಳೆಯಲು
ಸೆ.15ರ
ಗುರುವಾರ
ರಾಜ್ಯಾದ್ಯಂತ
ರೈಲು
ಬಂದ್
ನಡೆಸಲಾಗುತ್ತದೆ'
ಎಂದು
ಹೇಳಿದರು.[ಕಿರಣ್
ಮಜುಂದಾರ್
ಷಾ
ವಿರುದ್ಧ
ವಾಟಾಳ್
ವಾಗ್ದಾಳಿ]
'ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ರೈಲ್ವೆ ಬಂದ್ಗೆ ಕರೆ ನೀಡಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ರೈಲ್ವೆ ಬಂದ್ ನಡೆಯಲಿದೆ' ಎಂದು ವಾಟಾಳ್ ನಾಗರಾಜ್ ಹೇಳಿದರು.[ಚಿತ್ರಗಳು : ಕಾವೇರಿಗಾಗಿ ಕರ್ನಾಟಕ ಬಂದ್]
ಒನ್ ಇಂಡಿಯಾ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, 'ದೇಶ ಮತ್ತು ಸುಪ್ರೀಂಕೋರ್ಟ್ ಗಮನವನ್ನು ಸೆಳೆಯಲು ರೈಲ್ವೆ ಬಂದ್ ನಡೆಸಲಾಗುತ್ತಿದೆ. ಕನ್ನಡ ಒಕ್ಕೂಟದ ಕಾರ್ಯಕರ್ತರು ರಾಝ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈಲು ಸಂಚಾರವನ್ನು ತಡೆಯಲಿದ್ದಾರೆ' ಎಂದರು.
'ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಹಲವು ಸಭೆಗಳಾಗುತ್ತಿವೆ. ಇದರ ನಂತರ ಯಾವುದೇ ಬೆಳವಣಿಗೆಗಳು ನಡೆಯುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ವಿವಾದದಲ್ಲಿ ಮಧ್ಯಪ್ರವೇಶಿಸಬೇಕು' ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ' ಎಂದು ವಾಟಾಳ್ ಹೇಳಿದರು.
ಕರ್ನಾಟಕ ಬಂದ್ ಯಶಸ್ವಿ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಯಶಸ್ವಿಯಾಗಿತ್ತು. ಸೆ.12ರಂದು ಕಾವೇರಿ ಉಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕರ್ನಾಟಕ ಸರ್ಕಾರ ವಾದ ಮಂಡನೆ ಮಾಡಿ ಪರಿಸ್ಥಿತಿ ವಿವರಿಸಲಿದೆ.['ಕುಡಿಯಲು ನೀರು ಕೇಳುತ್ತಿಲ್ಲ, ಸಾಂಬಾ ಬೆಳೆಗೆ ಕೇಳುತ್ತಿದ್ದಾರೆ']