ಮಂಡ್ಯ : ಕಾವೇರಿ ನೀರಿನ ನಿಗಾ ವಹಿಸಲು ತಂಡ ರಚನೆ
ಮಂಡ್ಯ, ಆಗಸ್ಟ್ 19 : ಕಾವೇರಿ ಕಣಿವೆಯಲ್ಲಿ ಮಳೆಯಾಗದೆ ಕೆಆರ್ಎಸ್ ಭರ್ತಿಯಾಗಿಲ್ಲ. ಆದ್ದರಿಂದ, ಇದೀಗ ಜಲಾಶಯದಿಂದ ಬಿಡಲಾಗುತ್ತಿರುವ ನೀರನ್ನು ಸದ್ಭಳಕೆ ಮಾಡುವ ಕುರಿತು ನಿಗಾ ವಹಿಸಲು ತಂಡಗಳನ್ನು ರಚಿಸಲಾಗಿದೆ. ನೀರಿನ ಸದ್ಭಳಕೆ ಆಗಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಸೂಚನೆ ಕೊಟ್ಟಿದ್ದಾರೆ.
ನೀರಾವರಿ
ಇಲಾಖೆ
ಹಾಗೂ
ಕಂದಾಯ
ಇಲಾಖೆ
ಅಧಿಕಾರಿಗಳಿಗೆ
ಸೂಚನೆ
ನೀಡಿರುವ
ಜಿಲ್ಲಾಧಿಕಾರಿಗಳು,
ಪ್ರಸಕ್ತ
ಮುಂಗಾರು
ಹಂಗಾಮಿನಲ್ಲಿ
ಕಾವೇರಿ
ಜಲಾನಯನ
ಪ್ರದೇಶದಲ್ಲಿ
ವಾಡಿಕೆಯಂತೆ
ಮಳೆಯಾಗದ
ಹಿನ್ನೆಲೆಯಲ್ಲಿ
ಕೃಷ್ಣರಾಜ
ಸಾಗರ
ಜಲಾಶಯದಲ್ಲಿ
ನೀರಿನ
ಮಟ್ಟ
ಕಡಿಮೆಯಾಗಿದ್ದು,
ನಾಲೆಗಳಿಗೆ
ಬಿಡುವ
ನೀರನ್ನು
ಸಮರ್ಪಕವಾಗಿ
ಬಳಸುವಂತೆ
ಸೂಚಿಸಿದ್ದಾರೆ.
[ಆಗಸ್ಟ್
30ರ
ತನಕ
ಮಾತ್ರ
KRS
ನಿಂದ
ನೀರು
ಬಿಡುಗಡೆ]
ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಅವರು ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರಿನ ಪರಿಸ್ಥಿತಿ ಆತಂಕಕಾರಿ ಆಗಿರುವುದರಿಂದ ಆ.30ರ ವರೆಗೆ ಮಾತ್ರ ನೀರು ಹರಿಸಿ ನಂತರ ಸ್ಥಗಿತಗೊಳಿಸಲಾಗುತ್ತದೆ. ಇದಾದ 10 ದಿನಗಳ ನಂತರ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]
ಈಗಾಗಲೇ ಭತ್ತ ಬಿತ್ತನೆ ಮಾಡಿ ನಾಟಿ ಆಗಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಶ್ರಮಪಡಲಾಗುತ್ತಿದೆ. ಆದ್ದರಿಂದ, ಹೊಸದಾಗಿ ಯಾರು ಭತ್ತ ಒಟ್ಲು ಮಾಡಬಾರದು ಎಂದು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ನೀರಾವರಿ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳ ತಂಡವನ್ನು ರಚಿಸಲು ನಿರ್ದೇಶ ನೀಡಿದ್ದಾರೆ.[ಜಲಾಶಯಗಳ ನೀರು ಕುಡಿಯಲು ಮಾತ್ರ, ಕೃಷಿಗಿಲ್ಲ]
ತಂಡಗಳು ನಾಲೆಯ ಉದ್ದಕ್ಕೂ ಸಂಚಾರ ಮಾಡಿ ನಾಲೆಗೆ ಅಳವಡಿಸಿರುವ ಅನಧಿಕೃತ ಪಂಪ್ಸೆಟ್ಗಳನ್ನು ತೆರವುಗೊಳಿಸಬೇಕು. ಕರಪತ್ರಗಳನ್ನು ಮುದ್ರಿಸಿ ಗ್ರಾಮ ಪಂಚಾಯಿತಿ, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ವಿತರಣೆ ಮಾಡಿ ರೈತರಿಗೆ ಅರೆ ನೀರಾವರಿ ಬೆಳೆ ಬೆಳೆಯುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.
ಸ್ಥಳೀಯ ಕೇಬಲ್ ಚಾನೆಲ್ಗಳ ಮೂಲಕ ನಿರಂತರವಾಗಿ ರೈತರಿಗೆ ಮಾಹಿತಿ ನೀಡಬೇಕು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ, ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ಗಳನ್ನು ಅಳವಡಿಸಿ ಜಾಗೃತಿ ಮೂಡಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈಗಾಗಲೇ ನಾಲೆಯಲ್ಲಿ ನೀರು ಬಂದಿರುವ ಹಿನ್ನಲೆಯಲ್ಲಿ ಎಲ್ಲೆಡೆ ಭತ್ತದ ಕೃಷಿ ಸಮಾರೋಪಾದಿಯಲ್ಲಿ ಸಾಗಿರುವುದು ಕಂಡು ಬರುತ್ತಿದ್ದು, ಇದೀಗ ಆ.30ರ ಬಳಿಕ ನಾಲೆಗೆ ಬಿಡಲಾಗಿರುವ ನೀರನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿರುವುದರು ರೈತರನ್ನು ಆತಂಕಕ್ಕೆ ದೂಡಿದೆ.
ಮತ್ತೊಂದು ಸಂತಸದ ಸಂಗತಿ ಏನೆಂದರೆ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಕೊಡಗಿನಲ್ಲಿ ಚೇತರಿಸಿಕೊಂಡಿದ್ದು, ಹಾಗೆಯೇ ಮುಂದುವರೆದರೆ ಕೆಆರ್ಎಸ್ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.