ಮಂಡ್ಯದಲ್ಲಿ ಶುಕ್ರವಾರವೂ ಮುಂದುವರಿಯಿತು ಕಾವೇರಿ ಆಕ್ರೋಶ
ಮಂಡ್ಯ, ಸೆಪ್ಟೆಂಬರ್ 23: ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಂಡ ನಿರ್ಣಯದಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯನ್ನು ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲಿಸಿ, ಶುಕ್ರವಾರ ಧರಣಿ ನಡೆಸಿದವು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ದಸಂಸ, ಕನ್ನಡ ಸೇನೆ, ಬಸ್ ಮಾಲೀಕರ ಸಂಘ, ವಕೀಲರ ಸಂಘ, ಕದಂಬ ಸೈನ್ಯ, ರೈತ ಸಂಘ, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಕೋಲಾರ, ಕುಶಾಲನಗರ, ಮಡಿಕೇರಿ, ಬೆಂಗಳೂರು ಮತ್ತು ಮೈಸೂರಿನ ಪ್ರಗತಿಪರ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.[ಕಾವೇರಿ ವಿಚಾರ: ಮತ್ತೆ ಆಕ್ಷೇಪ ಸಲ್ಲಿಸಿದ ತಮಿಳುನಾಡು, ಕರ್ನಾಟಕ]
ಪತ್ರಕರ್ತರ
ಸಂಘ
ಬೆಂಬಲ
ಮಂಡ್ಯ,
ಮೈಸೂರು,
ಹಾಸನ
ಸೇರಿದಂತೆ
ವಿವಿಧ
ಜಿಲ್ಲೆಗಳಿಂದ
ಬಂದಿದ್ದ
ಪತ್ರಕರ್ತರು
ಕಾವೇರಿ
ಹೋರಾಟದಲ್ಲಿ
ಭಾಗವಹಿಸಿದ್ದರು.
ಮಂಡ್ಯದ
ಕಾರ್ಯನಿರತ
ಪತ್ರಕರ್ತರ
ಸಂಘದ
ಆವರಣದಲ್ಲಿ
ಜಮಾಯಿಸಿದ
ಪತ್ರಕರ್ತರು,
ಮೆರವಣಿಗೆ
ಮೂಲಕ
ಬಂದು
ಧರಣಿ
ನಡೆಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ರಾಜು, ಉಪಾಧ್ಯಕ್ಷ ಎಂ.ಆರ್.ಜಯರಾಮು, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ್ ಕೆರಗೋಡು, ಹಾಸನ ಜಿಲ್ಲಾ ಅಧ್ಯಕ್ಷೆ ಲೀಲಾವತಿ, ಮೈಸೂರು ಜಿಲ್ಲಾ ಅಧ್ಯಕ್ಷ ದೀಪಕ್ ನೇತೃತ್ವದಲ್ಲಿ ಪತ್ರಕರ್ತರು ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.[ಮೈಸೂರಲ್ಲಿ ಕಾವೇರಿ ನೀರು ಬಿಡದಂತೆ ಪ್ರತಿಭಟನೆ]
ಕೋಲಾರ, ಕುಶಾಲನಗರ, ಮಡಿಕೇರಿ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಮೈಸೂರಿನ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕವೇ ಹತ್ತಿ, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡದಂತೆ ಬೇಡಿಕೊಂಡು, ಕುಂಕುಮಾರ್ಚನೆ ಮಾಡಿಸಿದರು.
ಕಾಲ್ನಡಿಗೆಯಲ್ಲಿ
ಬಂದ
ಯುವಕರ
ತಂಡ
ಮೈಸೂರು
ಮತ್ತಿತರ
ಕಡೆಯಿಂದ
ಯುವಕರ
ತಂಡವೊಂದು
ಕಾಲ್ನಡಿಗೆಯಲ್ಲಿ
ನಗರದ
ಸರ್
ಎಂ.ವಿ.
ಪ್ರತಿಮೆ
ಬಳಿ
ನಡೆಯುತ್ತಿದ್ದ
ಧರಣಿ
ಸ್ಥಳಕ್ಕೆ
ಬಂದು,
ಕಾವೇರಿ
ಹೋರಾಟಕ್ಕೆ
ಬೆಂಬಲ
ನೀಡಿತು.
ಯುವಕರ ತಂಡದ ಮುಖ್ಯಸ್ಥ ಸತೀಶ್ ಮಾತನಾಡಿ, ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಒಂದು ಕಡೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದು ಹೇಳುವ ನ್ಯಾಯಾಲಯ ಮತ್ತೊಂದು ಕಡೆ ಕುಡಿಯುವ ನೀರನ್ನೇ ಕಿತ್ತುಕೊಳ್ಳುವ ಪ್ರಯತ್ನ ಮಾಡಿದೆ ಎಂದು ದೂರಿದರು.[ಜಾಣ್ಮೆಯ ನಡೆ : ರಂಗೋಲಿ ಕೆಳಗೆ ನುಸುಳಿದ ಕರ್ನಾಟಕ!]
ಮಂಡ್ಯ
ತಾಲೂಕು
ಪಂಚಾಯಿತಿ
ಧರಣಿ
ತಮಿಳುನಾಡಿಗೆ
ನೀರು
ಹರಿಸಬೇಕು
ಹಾಗೂ
ನಾಲ್ಕು
ವಾರಗಳಲ್ಲಿ
ಕಾವೇರಿ
ನೀರು
ನಿರ್ವಹಣಾ
ಮಂಡಳಿ
ರಚಿಸುವಂತೆ
ಆದೇಶ
ನೀಡಿರುವ
ಸುಪ್ರಿಂ
ಕೋರ್ಟ್
ನಿರ್ದೇಶನದ
ವಿರುದ್ಧ
ತಾಲೂಕು
ಪಂಚಾಯಿತಿ
ಸದಸ್ಯರು
ಮತ್ತು
ಅಧ್ಯಕ್ಷರು
ಧರಣಿ
ನಡೆಸಿದರು.
ಅಧ್ಯಕ್ಷ
ಕೆ.ಎಂ.ಬೀರಪ್ಪ
ನೇತೃತ್ವದಲ್ಲಿ
ತಾಲೂಕು
ಪಂಚಾಯಿತಿ
ಆವರಣದಿಂದ
ಮೆರವಣಿಗೆಯಲ್ಲಿ
ಬಂದ
ಸದಸ್ಯರು
ಧರಣಿ
ನಡೆಸಿದರು.
ಖಾಸಗಿ
ಬಸ್
ಮಾಲೀಕರ
ಸಂಘ
ಬೆಂಬಲ
ಯಾವುದೇ
ಕಾರಣಕ್ಕೂ
ಕಾವೇರಿ
ನೀರನ್ನು
ತಮಿಳುನಾಡಿಗೆ
ಹರಿಸಬಾರದು
ಎಂದು
ಒತ್ತಾಯಿಸಿ
ಖಾಸಗಿ
ಬಸ್
ಮಾಲೀಕರ
ಸಂಘದ
ಪದಾಧಿಕಾರಿಗಳು
ಧರಣಿಗೆ
ಬೆಂಬಲ
ಸೂಚಿಸಿದರು.[ಅಂಬಿಗೆ
ಚುಂಚಶ್ರೀ
ಪ್ರಶಸ್ತಿ
ನೀಡಿದರೆ
ಮಠಕ್ಕೆ
ಮುತ್ತಿಗೆ
ಹಾಕ್ತೀವಿ]
ಗ್ರಾಮ
ಪಂಚಾಯಿತಿ
ಬೆಂಬಲ
ಕಾವೇರಿ
ಚಳವಳಿಗೆ
ಬೆಂಬಲ
ವ್ಯಕ್ತಪಡಿಸಿರುವ
ಕೊಪ್ಪ
ಹೋಬಳಿ
ತಗ್ಗಹಳ್ಳಿ
ಗ್ರಾಮ
ಪಂಚಾಯಿತಿ
ಸದಸ್ಯರು
ಮತ್ತು
ಅಧ್ಯಕ್ಷರು
ಧರಣಿಯಲ್ಲಿ
ಪಾಲ್ಗೊಂಡರು.
ಕನ್ನಡ ಸೇನೆ, ಕದಂಬ ಸೈನ್ಯ, ದಸಂಸ, ಕಾಂಗ್ರೆಸ್ ಕಾರ್ಯಕರ್ತೆಯರು ಧರಣಿಯಲ್ಲಿ ಭಾಗವಹಿಸಿದ್ದರು. ಜಿ.ಮಾದೇಗೌಡ, ಎಚ್.ಡಿ.ಚೌಡಯ್ಯ, ಎಂ.ಎಸ್.ಆತ್ಮಾನಂದ, ಜಿ.ಬಿ.ಶಿವಕುಮಾರ್, ಎನ್.ರಾಜು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪತ್ರಕರ್ತರ ಪ್ರತಿಭಟನೆ
ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಚಳುವಳಿ ಬೆಂಬಲಿಸಿ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರು ಶುಕ್ರವಾರ ಭಾಗವಹಿಸಿ ಮೌನ ಪ್ರತಿಭಟನೆ ನಡೆಸಿದರು.
ಮಹಿಳಾ ಶಕ್ತಿ
ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ಧ ನಡೆಯುತ್ತಿರುವ ಕಾವೇರಿ ಚಳವಳಿ ಬೆಂಬಲಿಸಿ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಧರಣಿ ನಡೆಸಿದರು.
ವಕೀಲರಿಗೆ ತಡೆ
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡಿರುವ ನಿರ್ಣಯಕ್ಕೆ ಬದ್ಧರಾಗಿರಬೇಕು. ಪ್ರಧಾನಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಲು ಬೆಂಗಳೂರಿಗೆ ತೆರಳುತ್ತಿದ್ದ ವಕೀಲರನ್ನು ಪೊಲೀಸರು ತಡೆದರು.
ಪೊಲೀಸರ ಕ್ರಮಕ್ಕೆ ಖಂಡನೆ
ಬೆಂಗಳೂರಿಗೆ ಹೋಗದಂತೆ ತಡೆದ ಪೊಲೀಸರ ಕ್ರಮ ಖಂಡಿಸಿ ಮಂಡ್ಯದ ಜೆ.ಸಿ.ವೃತ್ತದಲ್ಲಿ ವಕೀಲರು ಮಾನವ ಸರಪಳಿ ನಿರ್ಮಿಸಿ, ಪ್ರತಿಭಟಿಸಿದರು.
ಹೋರಾಟಗಾರರ ಪ್ರತಾಪ
ಮೈಸೂರು-ಕೊಡಗು ಜಿಲ್ಲೆಯ ಸಂಸದ ಪ್ರತಾಪ್ ಸಿಂಹ ಅವರನ್ನು ಮಂಡ್ಯದಲ್ಲಿ ಕಾವೇರಿ ಹೋರಾಟಗಾರರು ತರಾಟೆಗೆ ತೆಗೆದುಕೊಂಡರು. ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿದರು. ರಾಜೀನಾಮೆ ನೀಡಿ, ಹೋರಾಟಕ್ಕೆ ಇಳಿಯಲು ಒತ್ತಾಯಿಸಿದರು.