6 ತಿಂಗಳು ಉಚಿತ ಆಹಾರದ ಭರವಸೆ: ದಿಡ್ಡಳ್ಳಿ ಆದಿವಾಸಿಗಳ ಸ್ಥಳಾಂತರ
ಅರಣ್ಯ ಇಲಾಖೆಯ 100 ಅಧಿಕಾರಿಗಳು ಮತ್ತು 250 ಪೊಲೀಸರ ತಂಡ ಇಂದು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ದಿಡ್ಡಳ್ಳಿ ಆದಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಆದಿವಾಸಿಗಳ ಒಟ್ಟು 600 ಕುಟುಂಬ ಇಂದು ತಮ್ಮ ನೆಲೆಯನ್ನು ತೊರೆದು ಅನಿವಾರ್ಯವಾಗಿ ಬೇರೆ
ಮಡಿಕೇರಿ, ಮೇ 06: ಮಡಿಕೇರಿಯ ಸಿದ್ದಾಪುರದ ದಿಡ್ಡಳ್ಳಿ ಆದಿವಾಸಿ ಪ್ರಕರಣಕ್ಕೆ ಕೊನೆಗೂ ಪೂರ್ಣವಿರಾಮ ದೊರತಂತಿದೆ. ಅರಣ್ಯ ಇಲಾಖೆಯ 100 ಅಧಿಕಾರಿಗಳು ಮತ್ತು 250 ಪೊಲೀಸರ ತಂಡ ಇಂದು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ದಿಡ್ಡಳ್ಳಿ ಆದಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಆದಿವಾಸಿಗಳ ಒಟ್ಟು 600 ಕುಟುಂಬ ಇಂದು ತಮ್ಮ ನೆಲೆಯನ್ನು ತೊರೆದು ಅನಿವಾರ್ಯವಾಗಿ ಬೇರೆಡೆಗೆ ಸಾಗಿದೆ.[ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆಗಿಲ್ಲವೆ ಪರಿಹಾರ?]
ಆದಿವಾಸಿ ನಾಯಕಿ ಮುತ್ತಮ್ಮ ನಿನ್ನೆ ತಾನೇ ಮರ ಹತ್ತಿ ಪ್ರತಿಭಟನೆ ನಡೆಸಿದ್ದು ಸುದ್ದಿಯಾಗಿತ್ತು, ಆದರೆ ಇಂದು ಶಾಸಕ ಕೆ.ಜಿ. ಬೋಪಯ್ಯ ಮಾಡಿದ ಸಂಧಾನ ಫಲ ನೀಡಿದ್ದು, ಸ್ಥಳಾಂತರಗೊಳ್ಳಲು ಮತ್ತಮ್ಮ ಸೇರಿದಮತೆ ಉಳಿದ ಆದಿವಾಸಿಗಳು ಒಪ್ಪಿದ್ದಾರೆ ಎನ್ನಲಾಗಿದೆ. ಸರ್ಕಾರ ಆದಿವಾಸಿಗಳಿಗೆ 6 ತಿಂಗಳ ಕಾಲ ಉಚಿತ ಆಹಾರ ನೀಡುವುದಾಗಿ ಭರವಸೆ ನೀಡಿದೆ.[ದಿಡ್ಡಳ್ಳಿ ಅರಣ್ಯದಲ್ಲಿ ಮತ್ತೆ ತಲೆ ಎತ್ತಿದ ಗುಡಿಸಲು!]
ಕುಡಿಗೆ ಬಳಿಯ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಸ್ಥಳದಲ್ಲಿ ಸರ್ಕಾರ ನೀಡಿದ ನಿವೇಶನಕ್ಕೆ ಈ ಆದಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.