ಕೊಡಗಿಗೆ ಭೂಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್?
ಮಡಿಕೇರಿ, ಜುಲೈ 31: ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು ಕೊಡಗಿಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.ಆದರೆ, ಇನ್ನೂ ಪ್ರವಾಸ ಕಾರ್ಯಕ್ರಮದ ವಿವರಗಳು ಲಭ್ಯವಾಗಿಲ್ಲ.
ಮೂಲಗಳ
ಪ್ರಕಾರ
ಜಿಲ್ಲೆಗೆ
ಆಗಮಿಸುವ
ಅವರು
ಆಗಸ್ಟ್
5ರಿಂದ
7ರ
ತನಕ
ವಾಸ್ತವ್ಯ
ಹೂಡಲಿದ್ದಾರೆ
ಎನ್ನಲಾಗಿದೆ.
ಭಾರತೀಯ
ಸೇನೆಯ
ಎಂಇಜಿ
ವಿಭಾಗದ
ವತಿಯಿಂದ
ಜಿಲ್ಲಾ
ಕೇಂದ್ರ
ಮಡಿಕೇರಿಯಲ್ಲಿ
ನಿವೃತ್ತ
ಯೋಧರ
Rally
ಕಾರ್ಯಕ್ರಮ
ಆ.6ರಂದು
ನಡೆಯಲಿದ್ದು
ಆ
Rallyಯಲ್ಲಿ
ಸೇನಾ
ಮುಖ್ಯಸ್ಥರು
ಭಾಗವಹಿಸುವ
ಸಾಧ್ಯತೆ
ಎನ್ನಲಾಗಿದೆ.
[ಭೂಸೇನಾ
ಮುಖ್ಯಸ್ಥ
ದಲ್
ಬೀರ್
ಸಿಂಗ್
ಸುಹಾಗ್
ವ್ಯಕ್ತಿಚಿತ್ರ]
ಭಾರತದ ಸೇನಾಪಡೆಗೆ ಪ್ರಥಮ ದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ವೀರ ಸೇನಾನಿ ಜನರಲ್ ತಿಮ್ಮಯ್ಯ ಸೇರಿದಂತೆ ಹಲವು ಮಹಾನ್ ವೀರಯೋಧರನ್ನು ನೀಡಿದ ಕೊಡಗಿಗೆ ಸೇನಾ ಮುಖ್ಯಸ್ಥರಾದ ಜನರಲ್ ದಲ್ಬೀರ್ ಸಿಂಗ್ ಅವರು ಆಗಮಿಸುತ್ತಿರುವುದು ಜಿಲ್ಲೆಯ ಯೋಧರಿಗೆ ಸಂತಸ ತಂದಿದೆ.
ಸೇನಾ ಮುಖ್ಯಸ್ಥರೊಂದಿಗೆ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸುವ ಸಾಧ್ಯತೆಯಿದೆ. ಅಧಿಕಾರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.