ಮಡಿಕೇರಿ ಬೇಸಿಗೆ ಶಿಬಿರದಿಂದ 3 ಮಕ್ಕಳು ನಾಪತ್ತೆ
ಅಮ್ಮತ್ತಿ ಗ್ರಾಮದ ಒಂದೇ ಕುಟುಂಬದ ಭೂಮಿಕಾ(9) , ದಿನೇಶ್(13), ಸರೋಜಾ(14) ಎಂಬ ಮೂವರು ಮಕ್ಕಳು ಬಾಲ ಮಂದಿರದ ಕಾಂಪೌಂಡ್ ಹಾರಿ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.
ಮಡಿಕೇರಿ, ಮೇ 09: ಒಂದು ತಿಂಗಳಿನಿಂದ ಮಡಿಕೇರಿಯ ಮಹಿಳಾ ಬಾಲ ಮಂದಿರದಲ್ಲಿದ್ದ ಮೂವರು ಮಕ್ಕಳು ಬಾಲಮಂದಿರದಿಂದ ಪರಾರಿಯಾದ ಘಟನೆ ಇಂದು ನಡೆದಿದೆ.
ಅಮ್ಮತ್ತಿ ಗ್ರಾಮದ ಒಂದೇ ಕುಟುಂಬದ ಭೂಮಿಕಾ(9) , ದಿನೇಶ್(13), ಸರೋಜಾ(14) ಎಂಬ ಮೂವರು ಮಕ್ಕಳು ಬಾಲ ಮಂದಿರದ ಕಾಂಪೌಂಡ್ ಹಾರಿ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.
ಬಾಲಮಂದಿರದ ಸಿಬ್ಬಂದಿಯೊಬ್ಬರು ನೀಡಿದ ದೂರಿನನ್ವಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮಕ್ಕಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.[ಮಡಿಕೇರಿ ಅಪ್ರಾಪ್ತೆಯೊಂದಿಗೆ ಆಟೋ ಚಾಲಕ ಸರಸ: ಬಂಧನ]
ಬೇಸಿಗೆ ಶಿಬಿರಕ್ಕೆಂದು ಬಾಲಮಂದಿರಕ್ಕೆ ಬಂದಿದ್ದ ಮಕ್ಕಳು ಪರಾರಿಯಾಗುವುದಕ್ಕೆ ಬಾಲಮಂದಿರದ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.
English summary
Three children of same family, from Ammatthi village, Madikeri district are missing from a summer camp in Madikeri