ಕೋಲಾರ: ಕೊನೆಗೂ ಚಿರತೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಜನತೆ
ಕೋಲಾರ, ಜುಲೈ 16 : ಕಳೆದ ಮೂರ್ನಾಲ್ಕು ತಿಂಗಳಿಂದ ಕೋಲಾರದ ಅರಾಭಿಕೊತ್ತನೂರು ಗ್ರಾಮದ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು ಕೊನೆಗೂ ಬೋನಿಗೆ ಬಿದ್ದಿದೆ.
ಅರಾಭಿಕೊತ್ತನೂರು ಗ್ರಾಮದ ಬಳಿ ಚಿರತೆಯೊಂದು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಇಲ್ಲಿನ ಜನರು ಕಾರ್ಯಚರಣೆ ನಡೆಸಿ ಬೆಟ್ಟದ ತಪ್ಪಲಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಇದರಿಂದ ಅಲ್ಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಗ್ರಾಮದ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿತ್ತು. ಈ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯವರು ಸುಸ್ತಾಗಿ ಹೋಗಿದ್ದರು.
ಈ ಚಿರತೆ ಇದೀಗ ಸಾರ್ವಜನಿಕರ ಬೋನಿಗೆ ಬಿದ್ದಿದೆ. ಸದ್ಯ ಚಿರತೆಯನ್ನ ನೋಡಲೆಂದು ಕುತೂಹಲದಿಂದ ಜನ ಮುಗಿ ಬಿದ್ದಿದ್ದಾರೆ.
Recommended Video
Karnataka: A leopard, terrorizing the village, captured in Kolar district's Arabikothanur village, handed over to forest officials. pic.twitter.com/aXePkjviJX
— ANI (@ANI_news) July 16, 2017
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆಯನ್ನ ಸಾಗಿಸಲು ಚಿಂತನೆ ನಡೆಸಿದ್ದಾರೆ.