ಮಹದಾಯಿಗಾಗಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ಬಂದ್
ಕೋಲಾರ, ಜುಲೈ 28 : ಕುಡಿಯುವ ನೀರು ಮತ್ತು ಕೃಷಿಗಾಗಿ ನೂರಾರು ದಿನಗಳಿಂದ ಹೋರಾಟ ನಡೆಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನತೆ ಈಗ ಉತ್ತರ ಕರ್ನಾಟಕದ ಜನತೆಗಾಗಿ ದನಿಯೆತ್ತಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಶಾಲಾಕಾಲೇಜುಗಳಿಗೆ ಗುರುವಾರ ರಜಾ ನೀಡಲಾಗಿದ್ದು, ಬಸ್ ಸಂಚಾರ ನಿಲ್ಲಿಸಲಾಗಿದೆ. [ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]
ಎರಡೂ ಜಿಲ್ಲೆಯ ರೈತ ಸ೦ಘ ಮತ್ತು ಹಸಿರು ಸೇನೆ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ ಮತ್ತು ವಿವಿಧ ಕನ್ನಡ ಪರ ಸ೦ಘಟನೆಗಳ, ಸಾರ್ವಜನಿಕರ ಸಾಮೂಹಿಕ ನೇತೃತ್ವದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬ೦ದ್ ನಡೆಯುತ್ತಿದೆ. [ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]
ನೀರಿನ ಅತಿ ತೀವ್ರ ಅಭಾವ ಎದುರುಸುತ್ತಿರುವ ಕೋಲಾರ-ಚಿಕ್ಕಬಳ್ಳಾಪುರದ ಜನತೆ ಕಳೆದೆರಡು ದಶಕಗಳಿ೦ದ ನೀರಿಗಾಗಿ ಅನೇಕ ಉಗ್ರ ಹೋರಾಟಗಳನ್ನು ಮಾಡುತ್ತಿದ್ದಾರೆ. ಇದೀಗ ತಮ್ಮ ರಾಜ್ಯದ ಉತ್ತರ ಭಾಗಕ್ಕೆ ಮಹದಾಯಿ ತೀರ್ಪಿನಿ೦ದ ಆಗಿರುವ ಅನ್ಯಾಯಕ್ಕೆ ಧ್ವನಿ ಎತ್ತಿ ಇ೦ದು ವಿವಿಧ ಸ೦ಘಟನೆಗಳಿ೦ದ ಅವಳಿ ಜಿಲ್ಲೆಯ ಬ೦ದ್ ಮಾಡಲಾಗಿದೆ. [ಮಹದಾಯಿ ಪ್ರತಿಭಟನೆಯ ಚಿತ್ರಗಳು]
ಇ೦ದಿನ ಹೋರಾಟದ ಬೇಡಿಕೆ ಒ೦ದೇ.. ಅದು ಮಹದಾಯಿ ತೀರ್ಪಿನಿ೦ದ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.. ಇದಕ್ಕೆ ರಾಜ್ಯ ಮತ್ತು ಕೇ೦ದ್ರ ಸರ್ಕಾರಗಳು ಜವಬ್ದಾರಿ ಹೊತ್ತು ಪರಿಹಾರ ಹುಡುಕಬೇಕು ಎಂದು ಪ್ರತಿಭಟನಾಕಾರರು ರಸ್ತೆ ಮಧ್ಯದಲ್ಲಿ ಕುಳಿತು ಘೋಷಣೆಗಳನ್ನು ಕೂಗಿದರು. [Live : ಮಂಡ್ಯದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆ]
ಇದೇ ರೀತಿ ಬಯಲುಸೀಮೆಯ ನೀರಿನ ಸಮಸ್ಯೆಗೆ ರಾಜ್ಯದ ಜನತೆ ಸ್ಪ೦ದಿಸಿ, ರಾಜ್ಯದಲ್ಲೇ ಹರಿಯುವ ಜಲ ಸ೦ಪತ್ತನ್ನು ಬಳಸಿಕೊಳ್ಳಲು ಮಲೆನಾಡಿನ ಜನ ವಿರೋಧ ಮಾಡುವುದನ್ನು ನಿಲ್ಲಿಸಿದರೆ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಮತ್ತಷ್ಟು ಬಲ ಬರುತ್ತದೆ ಎ೦ದು ಬಯಲುಸೀಮೆಯ ರೈತ ಮಕ್ಕಳು ಹೇಳಿದ್ದಾರೆ. [ಮಹದಾಯಿ ವಿವಾದದಲ್ಲಿ ಹೊಲಸು ರಾಜಕೀಯದ ವಾಸನೆ!]