ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೀರು ಕುಡಿಯಲು ಹೋದ 3 ಬಾಲಕರು ಕೆರೆಗೆ ಬಿದ್ದು ಸಾವು
ಬಿಸಿಲಿನಿಂದ ನೀರಿನ ದಾಹ ತಣಿಸಿಕೊಳ್ಳಲು ತಮ್ಮ ಅಜ್ಜನ ಜಮೀನಿನ ಬಾವಿಗೆ ಇಳಿದ ಮೂವರು ಬಾಲಕರು ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಐಬಿ ತಾಂಡಾದಲ್ಲಿ ಈ ಘಟನೆ ನಡೆದಿದೆ.
ಯಾದಗಿರಿ, ಏಪ್ರಿಲ್ 12: ಬಿರು ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಕುಡಿಯಲು ಹೋಗಿ ಮೂವರು ಬಾಲಕರು ನೀರು ಪಾಲಾದ ದುರ್ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಐಬಿ ತಾಂಡಾದಲ್ಲಿ ನಡೆದಿದೆ.
ಬಿಸಿಲಿನಿಂದ ನೀರಿನ ದಾಹ ತಣಿಸಿಕೊಳ್ಳಲು ತಮ್ಮ ಅಜ್ಜನ ಜಮೀನಿನ ಬಾವಿಗೆ ಬಾಲಕರು ಇಳಿದಿದ್ದರು. ಈ ವೇಳೆ ಬಾಲಕರು ನೀರು ಪಾಲಾಗಿದ್ದಾರೆ. ಮೃತ ಬಾಲಕರನ್ನು ಅಜಯ್ (12 ವರ್ಷ), ವಿಜಯ್ (11 ವರ್ಷ), ಗಣೇಶ್ (13 ವರ್ಷ) ಎಂದು ಗುರುತಿಸಲಾಗಿದೆ. [ಅತ್ತ ಬಿರುಬಿಸಿಲು, ಇತ್ತ ಬರಸಿಡಿಲು: ಮೂವರ ಸಾವು]
ತನ್ನ ಅಜ್ಜಿ ಯಮುನಾಬಾಯಿ ಜತೆ ಬಾಲಕರು ಹೊಲಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನಾರಾಯಣಪುರ ಪೊಲೀಸರ ಭೇಟಿ ನೀಡಿ ಮಕ್ಕಳ ಶವ ಮೇಲಕ್ಕೆತ್ತಿದ್ದಾರೆ. [ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!]
Comments
yadgir death summer 2017 children drinking water district news ಯಾದಗಿರಿ ಸಾವು ಬೇಸಿಗೆ 2017 ಮಕ್ಕಳು ಕುಡಿಯುವ ನೀರು
English summary
Three children died after they fell in to well at Naranayanapur Tanda of Surpur talluk, Yadgir district.
Story first published: Wednesday, April 12, 2017, 19:14 [IST]