ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಡವಾಗಿ ಬಂದ ಯಶ್ ಕಾರಿನ ಗ್ಲಾಸ್ ಪೀಸ್ ಪೀಸ್

ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಚಿತ್ರ ನಟ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಫೆಬ್ರವರಿ 27ರ ರಾತ್ರಿ ನಡೆದಿದೆ.

By Sachhidananda Acharya
|
Google Oneindia Kannada News

ಯಾದಗಿರಿ, ಫೆಬ್ರವರಿ 28: ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಚಿತ್ರ ನಟ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಫೆಬ್ರವರಿ 27ರ ರಾತ್ರಿ ನಡೆದಿದೆ.

ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ರೈತರ ಜತೆ ಸಂವಾದಕ್ಕೆ ನಟ ಯಶ್ ಮಧ್ಯಾಹ್ನ ಎರಡು ಗಂಟೆಗೆ ಬರಬೇಕಾಗಿತ್ತು. ಆದರೆ ರಾತ್ರಿ 9 ಗಂಟೆಗೆ ಬಂದಿದ್ದರಿಂದ ಆಕ್ರೋಶಗೊಂಡ ಅಭಿಮಾನಿಗಳು ಯಶ್ ಕಾರಿನ ಮೇಲೆ ಮುಗಿಬಿದ್ದರು. ಇದರಿಂದ ದುಬಾರಿ ಕಾರಿನ ಗ್ಲಾಸ್ ಪುಡಿ ಪುಡಿಯಾಯಿತು.[ಹಸಿರು ವಿಜಯಪುರಕ್ಕಾಗಿ ಫೆಬ್ರವರಿ 26ರಂದು ಮ್ಯಾರಥಾನ್]

Yadagiri: Actor Yash car attacked by his followers, as he came late to the program

ಕೆಲವು ಅಭಿಮಾನಿಗಳು ಆಕ್ರೋಶದಿಂದ ಚೇರ್ ಗಳನ್ನು ಎತ್ತಿ ಬಿಸಾಡಿ ದಾಂಧಲೆಯನ್ನೂ ಎಬ್ಬಿಸಿದ ಘಟನೆಗಳು ನಡೆಯಿತು. ತಮ್ಮ 'ಯಶೋಮಾರ್ಗ' ಕಾರ್ಯಕ್ರಮದ ಸಲುವಾಗಿ ಯಶ್ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತಿದ್ದು ಬರ ಅಧ್ಯಯನದಲ್ಲಿ ತೊಡಗಿದ್ದಾರೆ. ಇದೇ ಸಂಬಂಧ ಯಾದಗಿರಿ ಜಿಲ್ಲೆಯಲ್ಲಿ ರೈತರ ಜತೆ ಸಂವಾದ ಆಯೋಜಿಸಿಲಾಗಿತ್ತು.[ಯಶ್ ಹುಟ್ಟುಹಬ್ಬಕ್ಕೆ ವೆಬ್ ಲೋಕಕ್ಕೆ ಯಶೋಮಾರ್ಗ ಎಂಟ್ರಿ!]

English summary
Film Actor Yash car has been attacked by his followers as he came late at 9 pm instead of 2 pm for a discussion with farmers in in Surapara city, Yadagiri on February 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X