ಹೊಸ ಹುಮ್ಮಸ್ಸಿನೊಂದಿಗೆ ಬೆಂಗಳೂರಿಗೆ ಮರಳಿದ ಪಕ್ಷೇತರರು
ಬೆಂಗಳೂರು, ಜೂನ್ 09 : ಒಂದೇ ವಿಮಾನದಲ್ಲಿ ಮುಂಬೈಗೆ ಹಾರಿದ್ದ ಪಕ್ಷೇತರ ಶಾಸಕರು ಬೇರೆ-ಬೇರೆಯಾಗಿ ಕರ್ನಾಟಕಕ್ಕೆ ಬಂದಿದ್ದಾರೆ. ಜೂನ್ 11ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಪಕ್ಷೇತರ ಶಾಸಕರು ಯಾರಿಗೆ ಮತ ಹಾಕುತ್ತಾರೆ? ಎಂಬುದು ಕುತೂಹಲ ಮೂಡಿಸಿದೆ.
ಪಕ್ಷೇತರ
ಶಾಸಕರನ್ನು
ಕಾಂಗ್ರೆಸ್
ನಾಯಕರು
ಮುಂಬೈಗೆ
ಕರೆದುಕೊಂಡು
ಹೋಗಿದ್ದರು.
ರಾಜ್ಯಸಭೆ
ಚುನಾವಣೆಗೆ
ಬೇರೆ
ಪಕ್ಷದವರು
ಶಾಸಕರನ್ನು
ಸೆಳೆಯುವ
ಭೀತಿ
ಹಿನ್ನಲೆಯಲ್ಲಿ
ಮುಂಬೈಗೆ
ಅವರನ್ನು
ಕರೆದುಕೊಂಡು
ಹೋಗಲಾಗಿತ್ತು.
ಆದರೆ,
ಈ
ರೆಸಾರ್ಟ್
ರಾಜಕೀಯದ
ಬಗ್ಗೆ
ಟೀಕೆಗಳು
ವ್ಯಕ್ತವಾದ
ನಂತರ
ಬೇರೆ-ಬೇರೆಯಾಗಿ
ಶಾಸಕರು
ತವರಿಗೆ
ಮರಳಿದ್ದಾರೆ.
[ರಾಜ್ಯಸಭೆ
ಚುನಾವಣೆ
2016
:
ನಂಬರ್
ಗೇಮ್]
ಕಾಂಗ್ರೆಸ್ ಶಾಸಕರು ತಮ್ಮನ್ನು ಕರೆದುಕೊಂಡು ಹೋಗಿಲ್ಲ ಎಂಬುದನ್ನು ಸಾಬೀತು ಮಾಡಲು ಶಾಸಕರು ಬೇರೆ-ಬೇರೆಯಾಗಿ ವಾಪಸ್ ಆಗಿದ್ದಾರೆ. ಮುಂಬೈನಿಂದ ಬಂದ ಭಟ್ಕಳದ ಶಾಸಕ ಎಂ.ಮಂಕಳ್ ವೈದ್ಯ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಯಾವ ನಾಯಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಸೂಚಿಸಿಲ್ಲ' ಎಂದು ಹೇಳಿಕೆ ಕೊಟ್ಟು ಅಚ್ಚರಿ ಹುಟ್ಟಿಸಿದ್ದಾರೆ. [ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ ರಿಟರ್ನ್ಸ್, ಕಾಂಗ್ರೆಸ್ ಡೈರೆಕ್ಷನ್]
ಕೆಲವು ಕಾಂಗ್ರೆಸ್ ನಾಯಕರ ಪ್ರಕಾರ ರಾಜ್ಯಸಭೆ ಚುನಾವಣೆಗೆ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ಅವರ ಸೂಚನೆಯಂತೆ ಕೆ.ಸಿ.ರಾಮಮೂರ್ತಿ ಅವರನ್ನು 3ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಅವರು ಗೆಲ್ಲಲು ಪಕ್ಷೇತರರ ಬೆಂಬಲ ಅನಿವಾರ್ಯ. [ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?]
ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ 123 ಶಾಸಕ ಬಲ ಹೊಂದಿದೆ. ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಲು 45 ಮತಗಳು ಬೇಕು. ಅಭ್ಯರ್ಥಿಗಳಾದ ಆಸ್ಕರ್ ಫರ್ನಾಂಡೀಸ್ ಮತ್ತು ಜೈರಾಮ್ ರಮೇಶ್ ಅವರಿಗೆ 45 ಮತಗಳು ಹಂಚಿಕೆಯಾದರೆ 90 ಮತಗಳಾಗುತ್ತವೆ. [ರಾಜ್ಯಸಭೆ : ಚಾನ್ಸ್ ತೆಗೆದುಕೊಳ್ಳಲು ಕಾಂಗ್ರೆಸ್ ತಯಾರಿಲ್ಲ]
ಉಳಿದ 33 ಮತಗಳು ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಹಂಚಿಕೆಯಾಗುತ್ತದೆ. ಅವರಿಗೆ ಗೆಲುವು ಸಾಧಿಸಲು 12 ಮತಗಳ ಕೊರತೆ ಎದುರಾಗುತ್ತದೆ. ಇದರಿಂದಾಗಿ ಪಕ್ಷೇತರ ಶಾಸಕರ ಬೆಂಬಲ ಅಗತ್ಯವಾಗಿದೆ. ಆದ್ದರಿಂದ, ಪಕ್ಷೇತರ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಲಾಗಿತ್ತು.
ಜೆಡಿಎಸ್ನಿಂದ
ಬಿ.ಎಂ.ಫಾರೂಕ್
ಅವರು
ಅಭ್ಯರ್ಥಿಯಾಗಿದ್ದು,
ಅವರಿಗೆ
ಗೆಲುವು
ಸಾಧಿಸಲು
5
ಮತಗಳ
ಅಗತ್ಯವಿದೆ.
ಶನಿವಾರ
ನಡೆಯುವ
ಚುನಾವಣೆಯಲ್ಲಿ
ಪಕ್ಷೇತರರು
ಯಾರಿಗೆ
ಮತ
ಹಾಕುತ್ತಾರೆ?
ಎಂಬುದು
ಈಗ
ಎದ್ದಿರುವ
ಪ್ರಶ್ನೆ.