ಮಂಡ್ಯ : ವರುಣಾ ನಾಲೆಗೆ ಬಿದ್ದ ವ್ಯಾನ್, 6 ಸಾವು
ಮಂಡ್ಯ, ಆ.26 : ವರುಣಾ ನಾಲೆಗೆ ವ್ಯಾನ್ ಉರುಳಿ ಬಿದ್ದು ಆರು ಜನರು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಕೆಆರ್ಎಸ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬುಧವಾರ
ಮಧ್ಯಾಹ್ನ
ಶ್ರೀರಂಗಪಟ್ಟಣ
ತಾಲೂಕಿನ
ಬೆಳಗೊಳ
ಗ್ರಾಮದ
ಬಳಿ
ವ್ಯಾನ್
ಚಾಲಕನ
ನಿಯಂತ್ರಣ
ತಪ್ಪಿ
ವರುಣಾ
ನಾಲೆಗೆ
ಉರುಳಿ
ಬಿದ್ದಿದೆ.
ಚಾಲಕ,
ಇಬ್ಬರು
ಮಕ್ಕಳು
ಮತ್ತು
ಇಬ್ಬರು
ಮಹಿಳೆಯರು
ಸೇರಿ
6
ಜನರು
ಅಪಘಾತದಲ್ಲಿ
ಸಾವನ್ನಪ್ಪಿದ್ದಾರೆ.
[KRS
ನ
136
ಗೇಟ್
ಬದಲಾವಣೆ]
ಸ್ಪಂದನಾ ಬಾಲ ನ್ಯಾಯಮಂಡಳಿಗೆ ಸೇರಿದ ವ್ಯಾನ್ನಲ್ಲಿ ಮಹಿಳೆಯರು ಮತ್ತು ಮಕ್ಕಳು ಬಟ್ಟೆ ತೊಳೆಯಲೆಂದು ವರುಣಾ ನಾಲೆಗೆ ಆಗಮಿಸಿದ್ದರು. ವಾಪಸ್ ತೆರಳುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ತುಂಬಿ ಹರಿಯುತ್ತಿದ್ದ ನಾಲೆಗೆ ಉರುಳಿ ಬಿದ್ದಿದೆ. [ಕೈಕೊಟ್ಟ ಮುಂಗಾರು ಕೆಆರ್ ಎಸ್ ನಲ್ಲಿ ಎಷ್ಟು ನೀರಿದೆ?]
ಕೆಆರ್ಎಸ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ವ್ಯಾನ್ ಮತ್ತು ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಮೃತಪಟ್ಟಿವರ ವಿವರ : ಮೃತಪಟ್ಟವರನ್ನು ವ್ಯಾನ್ ಚಾಲಕ ನರಸಿಂಹ, ಸ್ನೇಹಾ, ನಿತ್ಯಾ, ಪಡಿಯಮ್ಮ, ರಾಜು, ಜೋಸೆಫ್ ಎಂದು ಗುರುತಿಸಲಾಗಿದೆ. ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.