ಜಂಟಿ ಅಧಿವೇಶನ : ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು
ಬೆಂಗಳೂರು, ಫೆಬ್ರವರಿ 29 : ಕರ್ನಾಟಕ ವಿಧಾನಸಭೆಯ ಐದು ದಿನಗಳ ಜಂಟಿ ಅಧಿವೇಶನಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಹೊಸ ವರ್ಷದಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನವಿದಾಗಿದ್ದು, ಮಾರ್ಚ್ 5ರ ತನಕ ಜಂಟಿ ಅಧಿವೇಶನ ನಡೆಯಲಿದೆ.
ಸೋಮವಾರ
ಮಧ್ಯಾಹ್ನ
12
ಗಂಟೆಗೆ
ಜಂಟಿ
ಅಧಿವೇಶನ
ಆರಂಭವಾಯಿತು.
ರಾಜ್ಯಪಾಲ
ವಜುಭಾಯಿ
ವಾಲಾ
ಅವರು
ಜಂಟಿ
ಅಧಿವೇಶನ
ಉದ್ದೇಶಿಸಿ
ಮಾತನಾಡಿದರು.
ಕೇಂದ್ರ
ಬಜೆಟ್
ಮಂಡನೆ
ಆದ
ದಿನವೇ
ಜಂಟಿ
ಅಧಿವೇಶನ
ಆರಂಭವಾಗಿರುವುದು
ವಿಶೇಷ.
[ರಾಜ್ಯಪಾಲರು
ಹಿಂದಿಯಲ್ಲೇಕೆ
ಭಾಷಣ
ಮಾಡಬೇಕು?]
ಅಶ್ವರೂಢ ಪೊಲೀಸರ ಬೆಂಗಾವಲಿನಲ್ಲಿ ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಕಾಗೋಡು ತಿಮ್ಮಪ್ಪ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸ್ವಾಗತಿಸಿದರು. [ಹಿಂದಿ ಹೇರಿಕೆ. ಕರವೇ ನಾರಾಯಣ ಗೌಡ್ರ ಲೇಖನ - 1]
ಜಂಟಿ ಸದನ ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು, 50 ನಿಮಿಷಗಳಲ್ಲಿ 31 ಪುಟಗಳ ಭಾಷಣವನ್ನು ಓದಿ ಮುಗಿಸಿದರು. ವಿಧಾನಸಭಾ ಮತ್ತು ಪರಿಷತ್ ಸದಸ್ಯರಿಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿನ ರಾಜ್ಯಪಾಲರ ಭಾಷಣದ ಮುದ್ರಿತ ಪ್ರತಿಗಳನ್ನು ನೀಡಲಾಗಿತ್ತು. [ಮಾ. 3ಕ್ಕೆ ವಿಧಾನಸೌಧ ಬಳಿ ಕಬ್ಬು ಬೆಳೆಗಾರರ 'ಉಗುಳುವ ಚಳವಳಿ']
ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು
* ರೈತರ ಆತ್ಮಹತ್ಯೆಯನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರೈತರಿಗೆ ಅಗತ್ಯ ಸಾಲ ಸೌಲಭ್ಯವನ್ನು ಒದಗಿಸಲು ಸರ್ಕಾರ ಮುಂದಾಗಿದೆ. ತೀವ್ರ ಬರಗಾಲದ ಹಿನ್ನಲೆಯಲ್ಲಿ ರೈತರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
* ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನೀಡುವ ಪರಿಹಾರವನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ರೈತರ ವಿಧವಾ ಪತ್ನಿಯರಿಗೆ ನೀಡುವ ಮಾಸಿಕ ಪಿಂಚಣಿಯನ್ನು 500 ರಿಂದ 2 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಮಕ್ಕಳಿಗೆ ಸ್ನಾತಕೋತ್ತರ ಪದವಿ ತನಕ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಲಾಗಿದೆ.
*ರಾಜ್ಯದಲ್ಲಿ ಕಾನೂನು ಸುವಸ್ಯವಸ್ಥೆ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸ್ ಪಡೆಯನ್ನು ಬಲಶಾಲಿಯಾಗಿ ಮಾಡಲು 9 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 15 ಹೊಸ ಪೊಲೀಸ್ ಠಾಣೆ, 10 ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
* 1 ಕೋಟಿಗಿಂತಲೂ ಹೆಚ್ಚಿನ ಬಿಪಿಎಲ್ ಕುಟುಂಬ ಮತ್ತು ಅಂತ್ಯೋದಯ ಅನ್ನ ಯೋಜನೆ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿವೆ. ಈ ಕುಟುಂಬಗಳಿಗೆ 25 ರೂ. ದರದಲ್ಲಿ 1 ಲೀಟರ್ ತಾಳೆ ಎಣ್ಣೆ ಮತ್ತು 2 ಕೆ.ಜಿ. ಅಯೋಡಿನ್ ಉಪ್ಪನ್ನು 2 ರೂ. ದರದಲ್ಲಿ ನೀಡಲಾಗುತ್ತಿದೆ.
ಕಾಟಾಚಾರಕ್ಕೆ ಭಾಷಣ ಮುಗಿಸಿದ್ದಾರೆ : 'ರಾಜ್ಯಪಾಲ ವಜುಭಾಯಿ ವಾಲಾ ಅವರು ಕಾಟಾಚಾರಕ್ಕೆ ಸಂಪ್ರದಾಯದಂತೆ ಭಾಷಣ ಮಾಡಿ ಮುಗಿಸಿದ್ದಾರೆ. ಇದೊಂದು ನಿರಾಶಾದಾಯಕವಾದ ಭಾಷಣ' ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.
'ಭಾಷಣದಲ್ಲಿ ಹೈದರಾಬಾದ್-ಕರ್ನಾಟಕಕ್ಕೆ ಆದ್ಯತೆ ನೀಡಿಲ್ಲ. ಭಾಷಣದಲ್ಲಿ ದೂರದೃಷ್ಟಿ ಇಲ್ಲ. ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದಕ್ಕೆ ಮಾತ್ರ ಭಾಷಣ ಸೀಮಿತವಾಗಿದೆ' ಎಂದು ಶೆಟ್ಟರ್ ದೂರಿದ್ದಾರೆ.