ಮಾವಿಗೂ ತಟ್ಟಿದ ಬರದ ಬಿಸಿ, ಮಾರುಕಟ್ಟೆಯಿಂದ ಕಣ್ಮರೆ
ಉಡುಪಿ, ಮೇ 04 : ಬರಗಾಲ ಮತ್ತು ರಣ ಬಿಸಿಲಿನ ಬಿಸಿ ಮಾವಿನ ಬೆಳೆಗೂ ತಟ್ಟಿದೆ. ಉಡುಪಿಯ ಮಾರುಕಟ್ಟೆಯಲ್ಲಿರುತ್ತಿದ್ದ ಸ್ಥಳೀಯ ತಳಿಗಳ ಮಾವು ಈ ಬಾರಿ ಸಿಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 60ರಷ್ಟು ಮಾವಿನ ರಫ್ತು ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಜಿಲ್ಲೆಯಲ್ಲಿ
ಈ
ಬಾರಿ
ಚಳಿ
ಇರಲಿಲ್ಲ.
ಬಿಸಿಲಿನ
ಧಗೆಯೇ
ಹೆಚ್ಚಾಗಿತ್ತು.
ಆದ್ದರಿಂದ,
ನೈಸರ್ಗಿಕವಾಗಿ
ಬೆಳೆದು
ಸಿಹಿ
ಹಂಚುತ್ತಿದ್ದ
ಸ್ಥಳೀಯ
ತಳಿಯ
ಮಾವುಗಳೆಲ್ಲ
ಹೂವಿನ
ಹಂತದಲ್ಲಿಯೇ
ಕರಟಿ
ಹೋಗಿವೆ.
ಇದರಿಂದಾಗಿ
ಬೇಡಿಕೆ
ಇದ್ದರೂ
ಮಾವು
ಪೂರೈಕೆಯಾಗುತ್ತಿಲ್ಲ.
[ಕರ್ನಾಟಕದ
ಮಾವು
ನೇರ
ರಫ್ತಿಗಾಗಿ
ಕೇಂದ್ರಕ್ಕೆ
ಮನವಿ]
ಮಾರುಕಟ್ಟೆಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಸ್ಥಳೀಯ ತಳಿಗಳಾದ ಮುಂಡಪ್ಪ, ಮಲಬಾರ್, ತೋತಾಪುರಿ ಈ ಬಾರಿ ಮಾರುಕಟ್ಟೆ ಪ್ರವೇಶಕ್ಕೆ ಮುನ್ನವೇ ಕಣ್ಮರೆಯಾಗಿವೆ. ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ಗಿರಾಕಿಗಳನ್ನು ಕೂಗಿ ಕರೆಯುತ್ತಿದ್ದ ಮಾವಿನ ಯುಗ ಕಳೆದು ಹೋಗಿದೆ. [ಮೈಸೂರಿನ ರಸ್ತೆ ಬದಿಯಲ್ಲೇ ಮಾವಿನಸಂತೆ...]
ಹಿಂದೆ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಸ್ಥಳೀಯ ಮಾವಿನ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದವು. ಸಂತೆಯಲ್ಲಿ ಲೋಡ್ ಗಟ್ಟಲೆ ಮಾರಾಟವಾಗುತ್ತಿತ್ತು. ಆದರೆ, ಈಗ ಸಂತೆ ಮಾರುಕಟ್ಟೆಯಲ್ಲಿ ಈ ತಳಿಗಳು ಸಿಗುತ್ತಿಲ್ಲ. ವ್ಯಾಪಾರಿಗಳನ್ನು ವಿಚಾರಿಸಿದರೆ ಈ ಬಾರಿ ಚಳಿ ಇಲ್ಲ, ಮಳೆ ಇಲ್ಲ ಸುಡು ಬಿಸಿಲು ಮಾವು ಎಲ್ಲಿಂದ ಬರಬೇಕು ಬಿಡಿ ಎನ್ನುತ್ತಿದ್ದಾರೆ. [ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು]
ಡಜನ್ಗೆ 1000 ರೂ. : ಅಚ್ಚರಿಯಾದರೂ ಇದು ಸತ್ಯ. ಜ್ಯೂಸ್ ಪ್ರಿಯರ ಬೇಡಿಕೆಗಳಿಸಿರುವ ಬಂಗನಪಲ್ಲಿ ತಳಿಯ ಮಾವು ಮಾರುಕಟ್ಟೆಯಲ್ಲಿ ಬರುತ್ತಲೇ ಇಲ್ಲ. ಅದೆಲ್ಲಾ ಮುಂಬೈ, ಕೋಲ್ಕತ್ತಾ, ಪುಣೆ, ಮೊದಲಾದ ನಗರಗಳಿಗೆ ರಫ್ತಾಗುತ್ತಿವೆ.
ಅಲ್ಲಿ ಡಜನ್ ಮಾವಿನ ಬೆಲೆ 1 ರಿಂದ 2 ಸಾವಿರದ ತನಕ ಇದೆ. ಇಲ್ಲಿ ಈ ಮಾವಿನಹಣ್ಣು ಸಿಕ್ಕಿದರು ಅಷ್ಟೊಂದು ಗುಣಮಟ್ಟದ ಹಣ್ಣು ಸಿಗುವುದಿಲ್ಲ ಎನ್ನತ್ತಾರೆ ವ್ಯಾಪಾರಿಗಳು. ಸ್ಥಳೀಯವಾಗಿ ಹಣ್ಣು ಸಿಗದಿದ್ದರೂ, ಮಾರುಕಟ್ಟೆಗೆ ಬರವು ಮೊದಲೇ ಹಣ್ಣುಗಳು ಬೇರೆ ನಗರಗಳಿಗೆ ಹೋಗುತ್ತಿವೆ.