ಹುಡುಗಿಗಾಗಿ ಹಾಸನ ಬಸ್ ನಿಲ್ದಾಣದಲ್ಲಿ ಮಾರಾಮಾರಿ
ಹಾಸನ, ಜೂನ್ 22 : ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ನೂರಾರು ಜನರೆದುರು ಬಡಿದಾಡಿಕೊಂಡ ಘಟನೆ ಹಾಸನ ಬಸ್ ನಿಲ್ದಾಣದಲ್ಲಿ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡಿರುವ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಂಗಳವಾರ
ಸಂಜೆ
ಹಾಸನದ
ಬಸ್
ನಿಲ್ದಾಣದಲ್ಲಿ
ಈ
ಘಟನೆ
ನಡೆದಿದೆ.
ಸುದೀಪ್
ಮತ್ತು
ಸುನೀಲ್
ಎಂಬ
ಹುಡುಗರು
ಒಬ್ಬಳೆ
ಹುಡುಗಿಯನ್ನು
ಪ್ರೀತಿಸುತ್ತಿದ್ದರು.
ಸುದೀಪ್
ಪ್ರೀತಿ
ಮಾಡುತ್ತಿರುವ
ವಿಷಯ
ತಿಳಿದ
ಸುನೀಲ್
ಆತನ
ಮೇಲೆ
ಹಲ್ಲೆ
ಮಾಡಿದ್ದಾನೆ.
[ಹೆಣ್ಣಿನ
ಆಶೆಗೆ
ಬಿದ್ದವರನ್ನು
ಏನು
ಮಾಡ್ತಿದ್ದರು
ಗೊತ್ತಾ?]
ಸುದೀಪ್ ಹಿಂಬಾಲಿಸಿಕೊಂಡು ಬಂದ ಸುನೀಲ್ ಆತನ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಸುದೀಪ್ ಸುನೀಲ್ ಮೇಲೆ ಹಲ್ಲೆ ಮಾಡಿದ್ದಾನೆ. ಸುನೀಲ್ ಸಹೋದರ ಮತ್ತು ಆತನ ಗೆಳೆಯರು ಈ ಸಂದರ್ಭದಲ್ಲಿ ಆತನನ್ನು ತಡೆಯಲು ಮುಂದಾಗಿದ್ದಾರೆ. [ಬೆಂಗಳೂರಲ್ಲಿ 27/65 'ಅಪೂರ್ವ'ವಾದ ಪ್ರೇಮವಿವಾಹ ಕಥೆ]
ಈ ಸಮಯದಲ್ಲಿ ಸುನೀಲ್ ಸುದೀಪ್ಗೆ ಚಾಕುವಿನಿಂದ ಇರಿದಿದ್ದಾನೆ. ಸುದೀಪ್ ಆತನ ಸ್ನೇಹಿತ ಹೇಮಂತ್ ಸೇರಿಕೊಂಡು ನೂರಾರು ಜನರ ಮುಂದೆಯೇ ಸುನೀಲ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ನೂರಾರು ಜನರಿದ್ದರೂ ಯಾರೂ ಜಗಳ ಬಿಡಿಸಲಿಲ್ಲ. [ಪ್ರಿಯಕರನ ಹಿಂಸೆಗೆ ಬೇಸತ್ತ 15 ವರ್ಷದ ಹುಡುಗಿ ಆತ್ಮಹತ್ಯೆ]
ಸುನೀಲ್ ಹೊಟ್ಟೆ ಮತ್ತು ಎದೆ ಭಾಗಕ್ಕೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.