ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮತ್ತಷ್ಟು ಅಧಿಕಾರಿಗಳ ನೇಮಕ
ಬೆಂಗಳೂರು, ಮಾರ್ಚ್ 30 : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿಯೇ ಸರ್ಕಾರ ಎಸಿಬಿಗೆ ಕೆಲವು ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಸರ್ಕಾರ
ಮಂಗಳವಾರ
ಐವರು
ಐಪಿಎಸ್
ಅಧಿಕಾರಿಗಳನ್ನು
ವರ್ಗಾವಣೆ
ಮಾಡಿ
ಆದೇಶ
ಹೊರಡಿಸಿದೆ.
ಇವರಲ್ಲಿ
ಇಬ್ಬರು
ಅಧಿಕಾರಿಗಳನ್ನು
ಎಸಿಬಿಗೆ
ನೇಮಕ
ಮಾಡಲಾಗಿದೆ.
ಕಳೆದ
ವಾರ
ಎಸಿಬಿಯ
ಎಡಿಜಿಪಿಯಾಗಿ
ಕೆ.ವಿ.
ಗಗನದೀಪ್
ಮತ್ತು
ಐಜಿಪಿಯಾಗಿ
ಡಾ.ಎಂ.ಎ.
ಸಲೀಂ
ಅವರನ್ನು
ನೇಮಕ
ಮಾಡಲಾಗಿತ್ತು.
[ಭ್ರಷ್ಟಾಚಾರ
ನಿಗ್ರಹ
ದಳದ
ಯಾವ
ಕಚೇರಿ
ಎಲ್ಲಿರುತ್ತದೆ?]
ವರ್ಗಾವಣೆಗೊಂಡವರು : ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ಲಾಬೂರಾಂ ಅವರನ್ನು ಎಸಿಬಿ ಬೆಂಗಳೂರು ನಗರದ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಹಾಸನದ ಎಸ್ಪಿಯಾಗಿದ್ದ ರಮಣ್ ಗುಪ್ತಾ ಅವರನ್ನು ಎಸಿಬಿ ಪ್ರಧಾನ ಕಚೇರಿ ಆಡಳಿತ ವಿಭಾಗದ ಎಸ್ಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. [ಎಸಿಬಿ ರಚನೆ : ಸಿದ್ದರಾಮಯ್ಯ ಸ್ಪಷ್ಟನೆಗಳು]
ಲಾಬೂರಾಂ ಅವರಿಂದ ತೆರವಾದ ಹುದ್ದೆಗೆ ಅಜಯ್ ಹಿಲೋರಿ ಅವರನ್ನು ನೇಮಿಸಲಾಗಿದೆ. ಬೆಂಗಳೂರ ನಗರ ಆಡಳಿತ ವಿಭಾಗದ ಡಿಸಿಪಿಯಾಗಿದ್ದ ರಾಹುಲ್ ಕುಮಾರ್ ಶಹಾಪುರ್ವಾಡ್ ಅವರನ್ನು ಹಾಸನ ಎಸ್ಪಿಯಾಗಿ ನೇಮಿಸಲಾಗಿದೆ. [ಸಂದರ್ಶನ : ಎಸಿಬಿ ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ]
ಕಲಬುರಗಿ ಪೊಲೀಸ್ ತರಬೇತಿ ಕಾಲೇಜಿನ ಪ್ರಾಂಶುಪಾಲ ಹುದ್ದೆಗೆ ಇಶಾಪಂತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರಲ್ಲಿ ಕೇಂದ್ರ ಕಚೇರಿ : ಎಸಿಬಿಯ ಕೇಂದ್ರ ಕಚೇರಿ ಬೆಂಗಳೂರಿನ ಖನಿಜ ಭವನದಲ್ಲಿರುತ್ತದೆ. ಪ್ರತಿ ಜಿಲ್ಲೆಯಲ್ಲಿಯೂ ಎಸಿಬಿ ದಳ ರಚನೆಯಾಗಲಿದ್ದು, ಡಿಎಸ್ಪಿ ದರ್ಜೆಯ ಅಧಿಕಾರಿ ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.